SIRA : ಸಿಗ್ನಲ್‌ ಲೈಟ್‌ಗಳಿಲ್ಲದೆ ಜನರ ಪರದಾಟ | ಅಡ್ಡಾದಿಡ್ಡಿ ಸಂಚಾಕ್ಕೆ ಬೀಳುತ್ತಾ ಬ್ರೇಕ್‌?

SIRA NEWS : ಪ್ರತಿ ನಗರದಲ್ಲಿಯೂ ವಾಹನಗಳ ಸುಗಮ ಸಂಚಾರಕ್ಕಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಸಿಗ್ನಲ್‌ ಲೈಟ್‌ಗಳನ್ನು ಹಾಕಿರುತ್ತಾರೆ. ಇಂತಹ ಸಿಗ್ನಲ್‌ ಲೈಟ್‌ಗಳಿಂದಾಗಿ ಎರಡು ದಿಕ್ಕಿಗೂ ಚಲಿಸುವ ವಾಹನಗಳು ಅತ್ಯಂತ ಸುರಕ್ಷಿತವಾಗಿ ಸಂಚರಿಸುತ್ತವೆ. ಜೊತೆಗೆ ಪಾದಚಾರಿಗಳಿಗೂ ಯಾವುದೇ ಕಿರಿಕಿರಿ ಉಂಟಾಗುವುದಿಲ್ಲ. ಆದ್ರೆ ಶಿರಾದಲ್ಲಿ ಮಾತ್ರ ಈ ಸಿಗ್ನಲ್‌ ಲೈಟ್‌ಗಳಿಲ್ಲದೆ ವಾಹನಗಳ ಸಂಚಾರಕ್ಕೆ ಜನರು ಹೈರಾಣಾಗುತ್ತಿದ್ದು, ಅಪಘಾತಗಳ ತಾಣವಾಗುತ್ತಿವೆ ರಸ್ತೆಗಳು.

ಶಿರಾ ನಗರದಲ್ಲಿ ಸಿಗ್ನಲ್‌ ಲೈಟ್‌ಗಳಿಲ್ಲದೆ ವಾಹನಗಳು ಅಡ್ಡಾದಿಡ್ಡಿ ಸಂಚಾರ ಮಾಡುತ್ತಿದ್ದವು. ರಸ್ತೆಗಳಲ್ಲಿ ಸಿಗ್ನಲ್‌ ಲೈಟ್‌ಗಳಿಲ್ಲ, ಅಪಘಾತಗಳು ಹೆಚ್ಚಾಗುತ್ತಿವೆ ಅನ್ನೋ ಆರೋಪಗಳು ಕೇಳಿಬಂದಿತ್ತು.  ಇದೇ ಕಾರಣಕ್ಕೆ ನಗರಸಭೆಯ ಸಹಯೋಗದಲ್ಲಿ ಪ್ರಮುಖ ರಸ್ತೆಯಲ್ಲಿಯೇ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸಿ ಅದನ್ನು ಉದ್ಘಾಟನೆ ಕೂಡ ಮಾಡಲಾಗಿತ್ತು. ಆದ್ರೆ ಅದರ ಸರಿಯಾದ ನಿರ್ವಹಣೆ ಇಲ್ಲದೆ ಲೈಟ್‌ಗಳು ಆನ್‌ ಆಗುತ್ತಿಲ್ಲ. ಇತ್ತ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಜೀವಭಯದಲ್ಲಿಯೇ ಓಡಾಡುವಂತಾಗಿದೆ.

ಇನ್ನು ನಗರಸಭೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸಲಾಗಿದೆ. ಇತ್ತ ಶಿರಾ - ಅಮರಪುರ ರಸ್ತೆ,  ಶಿರಾ-ಹುಳಿಯಾರ್ ರಸ್ತೆ, ಅಂಬೇಡ್ಕರ್‌ ವೃತ್ತ. ಹೀಗೆ ಎಲ್ಲಾ ಕಡೆಗಳಲ್ಲೂ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಲಾಗಿದೆ. ಆದ್ರೆ ಯಾವೊಂದು ಸಿಗ್ನಲ್‌ ಲೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸದೆ ತುಕ್ಕುಹಿಡಿಯುತ್ತಿವೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿದ್ದು, ಅಪಘಾತಗಳ ತಾಣಗಳಾಗಿ ರಸ್ತೆಗಳು ಮಾರ್ಪಾಡಾಗುತ್ತಿವೆ.

ಈ ಹಿಂದೆ ನಗರಸಭಾಧ್ಯಕ್ಷೆ   ಜ್ಞಾನಪೂರ್ಣಮ್ಮ ಅವರ ಕಾಲದಲ್ಲಿ ಚಾಲನೆ ನೀಡಲಾಗಿದ್ದ ನಗರದ ಅಂಬೇಡ್ಕರ್ ವೃತ್ತ ಹಾಗೂ ದರ್ಗಾ ವೃತ್ತದಲ್ಲಿ 12 ವರ್ಷಗಳ ಹಿಂದೆ ತಲಾ ₹10 ಲಕ್ಷ ವೆಚ್ಚದಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಲಾಯಿತು. ಆದರೆ ಈ ಸಂಚಾರ ದೀಪಗಳು ಕೆಲಸ ಮಾಡಿದ್ದು ಬೆರಳೆಣಿಕೆಯಷ್ಟು ದಿನಗಳು ಮಾತ್ರ. ಆದ್ರೆ ನಗರದ ಮುಖ್ಯರಸ್ತೆಯ ವೃತ್ತಗಳಲ್ಲಿ ಟ್ರಾಫಿಕ್‌ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ. ಸಿಗ್ನಲ್‌ ಲೈಟ್‌ಗಳು ಇದ್ದರು ಕೂಡ ಕಾರ್ಯನಿರ್ವಹಿಸುತ್ತಿಲ್ಲ ಅಂತ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.

Author:

...
Keerthana J

Copy Editor

prajashakthi tv

share
No Reviews