CHIKKANAYAKANAHALLI : KSRTC ಬಸ್ ನಿಲ್ದಾಣ ಅಂದರೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಇಂತಹ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು KSRTC ಅಧಿಕಾರಿಗಳ ಕರ್ತವ್ಯ. ಆದರೆ ಇಲ್ಲೊಂದು ಕಡೆ ಕತ್ತಲಾದರೆ ಸಾಕು KSRTC ಬಸ್ ನಿಲ್ದಾಣದಲ್ಲಿ ಬೆಳಕಿಲ್ಲದೆ ಜನರು ಪರದಾಡುತ್ತಿದ್ದಾರೆ. ಜೊತೆಗೆ ಕೂರಲು ಖುರ್ಚಿಗಳಲ್ಲಿದೆ ಜನರು ಘಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಚಿಕ್ಕನಾಯಕನಹಳ್ಳಿ ಹಲವಾರು ಘಟಾನುಘಟಿ ನಾಯಕರನ್ನು ಹೊಂದಿರುವ ತಾಲೂಕು. ಇಂತಹ ತಾಲೂಕಿನಲ್ಲಿ KSRTC ಬಸ್ ನಿಲ್ದಾಣದಲ್ಲಿ ರಾತ್ರಿ ಆದರೆ ಕಗ್ಗತ್ತಲು ಕವಿದು, ಜನರು ಬಸ್ ನಿಲ್ದಾಣದ ಕಡೆ ಮುಖಮಾಡಿ ಕೂಡ ನೋಡಲು ಸಾಧ್ಯವಾಗ್ತಿಲ್ಲ. ಕಾರಣ ಭಯ ಬೆಳಕ್ಕಿದ್ದಾಗಲೇ ದರೋಡೆಯಂತಹ ಪ್ರಕರಣಗಳು ನಡೆಯುವಂತ ಈ ಕಾಲದಲ್ಲಿ ಕತ್ತಲಲ್ಲಿ ಜನರು ಹೇಗೆ ಪ್ರಯಾಣಿಸುತ್ತಾರೆ ಅನ್ನೋ ಆಗಾಗಿದೆ. ರಾತ್ರಿಯ ಕತ್ತಲಿನಲ್ಲಿಯೇ ಕೂತು ಗಂಟೆಗಟ್ಟಲೇ ಬಸ್ಗಳಿಗೆ ಕಾಯಬೇಕು. ಕತ್ತಲಿನ ಭಯ ಒಂದು ಕಡೆಯಾದರೆ, ಪ್ರಯಾಣಿಕರಿಗೆ ಕೂರಲು ಖುರ್ಚಿಗಳ ವ್ಯವಸ್ಥೆ ಇಲ್ಲ ಅಂತಾ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ನಿಲ್ದಾಣದಲ್ಲಿ ಎರಡು ಪ್ಲಾಟ್ಫಾರಂಗಳಿದ್ದು ಪಾರ್ಕಿಂಗ್ ಸ್ಥಳ, ಶೌಚಾಲಯ ಸಮೀಪದ ಭಾಗದಲ್ಲಿ ಹಾಗು ಹಿಂಭಾಗದ ಪ್ಲಾಟ್ ಫಾರಂಗಳಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ. ನಿಲ್ದಾಣದ ಮೇಲೆ ಹೈಮಾಸ್ಕ್ ದೀಪವಿದ್ದು, ಅದು ಕೆಟ್ಟುಹೋಗಿದೆ. ಪ್ಲಾಟ್ ಫಾರಂನಲ್ಲಿ ರಾತ್ರಿ ವೇಳೆ ಬಸ್ಸಿಗಾಗಿ ಕಾದು ನಿಲ್ಲುವವರಿಗೆ, ಮುಖ್ಯವಾಗಿ ಮಹಿಳೆಯರು ಜೀವ ಭಯದಲ್ಲಿಯೇ ನಿಲ್ಲುವಂತಾಗಿದೆ. ಇತ್ತ ಅಲ್ಲಿರುವ ಶೌಚಾಲಯಗಳು ಕೂಡ ಸ್ವಚ್ಛತೆ ಇಲ್ಲದೆ ಸೊರಗುತ್ತಿವೆ.
ಇಡೀ ಬಸ್ ನಿಲ್ಲಾಣದಲ್ಲಿ ಕೇವಲ 4 ವಿದ್ಯುತ್ ದೀಪಗಳಿವೆ. ಹೋಟೆಲ್ ಜಾಗ, ಟಿಸಿ ರೂಮಿನ ಸಮೀಪ ಮಾತ್ರ ಬೆಳಕು ಬರುತ್ತದೆ. ಮುಖ್ಯವಾಗಿ ನಿಲ್ದಾಣದ ಆವರಣದಲ್ಲಿ, ಆಗಮನ, ನಿರ್ಗಮನ ಸ್ಥಳದಲ್ಲಿ ಕತ್ತಲು ಆವರಿಸಿಕೊಳ್ಳುತ್ತಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸಬೇಕಿದೆ.