INDIA : ಅಂತರಾಷ್ಟ್ರೀಯ ಹಣಕಾಸು ನಿಗಮ (IMF) ಮತ್ತು ವಿಶ್ವಬ್ಯಾಂಕ್ ಬಳಿ ಸಾಲಕ್ಕಾಗಿ ಆರ್ಥಿಕ ಸಂಕಷ್ಟದಲ್ಲಿ ಭಿಕ್ಷೆ ಬೇಡುವಂತಾಗಿರುವ ಪಾಕಿಸ್ತಾನ, ಈಗ ಇಂಡಸ್ ನದಿ ನೀರಿಗಾಗಿ ಭಾರತವನ್ನೇ ವಿನಂತಿಸುತ್ತಿದೆ. ಕಳೆದ ಏಪ್ರಿಲ್ 22ರಿಂದ ಈವರೆಗೂ ಪಾಕಿಸ್ತಾನ ಭಾರತದ ಜಲಶಕ್ತಿ ಸಚಿವಾಲಯಕ್ಕೆ ನಾಲ್ಕು ಬಾರಿ ಪತ್ರ ಬರೆದಿದ್ದು, ನದಿನೀರಿನ ಹಂಚಿಕೆಗಾಗಿ ಮನವಿ ಮಾಡಿದೆ.
ಪಾಕಿಸ್ತಾನ ಬರೆಯುತ್ತಿದ್ದ ನಾಲ್ಕು ಪತ್ರಗಳಿಗೂ ಭಾರತವು ತಕ್ಕ ರೀತಿಯಲ್ಲಿ ಉತ್ತರ ನೀಡಿದ್ದು, ಪ್ರಸ್ತುತ ಜಲ ಹಂಚಿಕೆ ಮತ್ತು ತಾಂತ್ರಿಕ ವಿಷಯಗಳ ಬಗ್ಗೆ ಯಾವುದೇ ತಾಕೀತು ಬೇಡವೆಂದು ಸ್ಪಷ್ಟಪಡಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ 1960ರಲ್ಲಿ ಇಂಡಸ್ ವಾಟರ್ ಟ್ರಿಟಿ (Indus Waters Treaty) ಅನ್ವಯ ಪಾಕಿಸ್ತಾನಕ್ಕೆ ಸಿಂಧೂ, ಜೆಹ್ಲಂ ಮತ್ತು ಚೆನಾಬ್ ನದಿಗಳ ನೀರು ಹಂಚಿಕೆಯಾಗುತ್ತಿದೆ. ಆದರೆ ಸದ್ಯ ಪಾಕ್ ದೇಶದ ಆರ್ಥಿಕ, ರಾಜಕೀಯ ಅಸ್ಥಿರತೆಗಳ ನಡುವೆ ನೀರಿನ ಹಂಚಿಕೆಯ ವಿಷಯವನ್ನೂ ರಾಜಕೀಯ ಅಸ್ತ್ರವನ್ನಾಗಿ ಬಳಸುವ ಪ್ರಯತ್ನವನ್ನೂ ಮಾಡುತ್ತಿದೆ.
ಪಾಕಿಸ್ತಾನದಿಂದ ನಿರಂತರವಾಗಿ ಮನವಿಗಳು ಬಂದರೂ, ಭಾರತ ತನ್ನ ಹಕ್ಕುಗಳನ್ನು ಕಾಯ್ದುಕೊಳ್ಳುವ ನಿರ್ಧಾರದಲ್ಲಿದೆ. ನೀರಿನ ವಿಚಾರದಲ್ಲಿ ಯಾವುದೇ ತೀರ್ಮಾನ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ತಾಂತ್ರಿಕ ಪರಿಶೀಲನೆಯ ಮೂಲಕವಷ್ಟೇ ಆಗಬೇಕೆಂಬ ನಿಲುವನ್ನು ಭಾರತ ಹೊಂದಿರುವುದು ಗಮನಾರ್ಹ. ಇಂಡಸ್ ನದಿ ನೀರಿಗಾಗಿ ಈಗ ಪಾಕಿಸ್ತಾನ ಅಂಗಲಾಚುತ್ತಿರುವ ಈ ಸ್ಥಿತಿ, ಆ ದೇಶದ ಆಂತರಿಕ ದುರ್ಬಲತೆಯನ್ನೇ ತೋರಿಸುತ್ತಿದೆ.