BANGALORE : ಕಾಲ್ತುಳಿತದ ಮಧ್ಯೆಯೂ ಹೊಸ ದಾಖಲೆ ಬರೆದ ನಮ್ಮ ಮೆಟ್ರೋ

BANGALORE NEWS : ಗುಜರಾತ್‌ನ AHMADABAD NARENDRA MODI STADIUM ನಲ್ಲಿ ನಡೆದ IPLಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ [RCB] ಪಂಜಾಬ್ ಕಿಂಗ್ಸ್ [PBKS] ತಂಡವನ್ನು ಮಣಿಸಿ ತನ್ನ ಚೊಚ್ಚಲ TROPHY ಗೆ ಮುತ್ತಿಟ್ಟಿತ್ತು. ಈ ಐತಿಹಾಸಿಕ ಜಯದ ಸಂಭ್ರಮಾಚರಣೆಗಾಗಿ RCB ತಂಡ ನಿನ್ನೆ ಬೆಂಗಳೂರಿಗೆ ಆಗಮಿಸಿತ್ತು.

ಇನ್ನು RCB ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ದುರ್ಮರಣಕ್ಕೆ ಸಿಲುಕಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಭಯಾನಕ ಘಟನೆ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಈ ಮಧ್ಯೆ ನೆನ್ನೆ ಒಂದೇ ದಿನ ನಮ್ಮ ಮೆಟ್ರೋ [METRO] ಹೊಸ ದಾಖಲೆ ದಾಖಲಿಸಿದೆ. ಒಂದೇ ದಿನದಲ್ಲಿ 9,66,732 ಪ್ರಯಾಣಿಕರು ಮೆಟ್ರೋ ಸೇವೆ ಬಳಸಿದ್ದು, ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯ ಪ್ರಯಾಣಿಕರು ದಾಖಲಾಗಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಾರ, ಇದರ ಹಿಂದಿನ ದಾಖಲೆಯು 8.7 ಲಕ್ಷ ಪ್ರಯಾಣಿಕರು ಎಂಬುದು. ಈ ಬಾರಿ ಅದು  ಗರಿಷ್ಠ ಪ್ರಮಾಣಕ್ಕೆ ಏರಿದೆ. ನೇರಳೆ ಮಾರ್ಗದಲ್ಲಿ 4,78,334 ಜನರು ಹಾಗೂ ಹಸಿರು ಮಾರ್ಗದಲ್ಲಿ 2,84,674 ಜನರು ಪ್ರಯಾಣಿಸಿದ್ದರು. ಮೆಜೆಸ್ಟಿಕ್ ನಿಲ್ದಾಣದಿಂದ ಮಾತ್ರ 2,03,724 ಜನರು ಮೆಟ್ರೋ ಪ್ರಯಾಣ ಕೈಗೊಂಡಿದ್ದಾರೆ. ಇನ್ನು ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿತ್ತು ಎಂದು BMRCL ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು ನಿನ್ನೆ RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಜನರು ಸಾವನ್ನಪ್ಪಿದ್ದು, ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಸದ್ಯ ಈ ದುರಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಮ್ಮ ಮೆಟ್ರೋ ವಿಷಾದ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೆಟ್ರೋ "ನಿನ್ನೆ ನಡೆದ ದುರದೃಷ್ಟಕರ ಘಟನೆ ನಮ್ಮ ಮನಸ್ಸನ್ನು ಭಾರಿಯಾಗಿಸಿದೆ. ದುಃಖಿತ ಕುಟುಂಬಗಳೊಂದಿಗೆ ನಾವು ಸಾಂತ್ವನ ಸೂಚಿಸುತ್ತೇವೆ. ಈ ಕಷ್ಟದ ವೇಳೆಯಲ್ಲಿ ನಾವು ಅವರ ಜೊತೆಗೆ ನಿಂತಿದ್ದೇವೆ." ಎಂದು ತಿಳಿಸಿದೆ.

 

Author:

...
Keerthana J

Copy Editor

prajashakthi tv

share
No Reviews