TUMAKURU : ಹೈಸ್ಕೂಲ್‌ ಫೀಲ್ಡ್‌ ಶೌಚಾಲಯಕ್ಕೆ ಬೀಗ ಜಡಿದ ಅಧಿಕಾರಿಗಳು

TUMAKURU NEWS : ತುಮಕೂರಿನ ಹೈಸ್ಕೂಲ್‌ ಫೀಲ್ಡ್‌ ಹೇಳಿ ಕೇಳಿ ಆಟದ ಮೈದಾನ. ಅಲ್ಲಿ ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ವಾಕಿಂಗ್‌ ಬರ್ತಾರೆ, ಫೀಲ್ಡ್‌ನಲ್ಲಿ ಕ್ರಿಕೇಟ್‌, ಕಬ್ಬಡ್ಡಿ, ಪುಟ್‌ಬಾಲ್‌ ಆಡಲು ವಿದ್ಯಾರ್ಥಿಗಳು, ಸಾರ್ವಜನಿಕರು ಬರ್ತಾರೆ. ಇಂತಹ ಸ್ಥಳದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು. ಅದರ ಸಂಪೂರ್ಣ ಜವಾಬ್ದಾರಿಯನ್ನು ಪಾಲಿಕೆ ಹೊತ್ತಿಕೊಂಡಿರುತ್ತದೆ. ಆದ್ಯಾಕೋ ಪಾಲಿಕೆಯ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಅಲ್ಲಿಗೆ ಬರುವ ಸಾರ್ವಜನಿಕರು ಮೂಲಭೂತ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಇತ್ತ ಅಧಿಕಾರಿಗಳ ಗಮನಕ್ಕೂ ತಂದರೂ ಯಾರೋಬ್ಬರು ಕೂಡ ಇತ್ತ ತಲೆ ಹಾಕುತ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ  ಸ್ಮಾರ್ಟ್ ಸಿಟಿ ಯೋಜನೆಯಡಿ ಲಕ್ಷ ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಶೌಚಾಲಯ ಕಟ್ಟಿ ವರ್ಷಗಳೇ ಕಳೆದಿವೆ. ಇಂದಿಗೂ ಓಪನ್‌ ಆಗಿಲ್ಲ. ಪಾಲಿಕೆಯ ಅಧಿಕಾರಿಗಳು ಅದಕ್ಕೆ ಬೀಗ ಜಡಿದಿದ್ದಾರೆ. ಇದರಿಂದ ಫೀಲ್ಡ್‌ಗೆ ಹೋಗುವ ಜನರು ಶೌಚಾಲಯವಿಲ್ಲದೆ ಪರದಾಡುತ್ತಿದ್ದಾರೆ.  ಇತ್ತ ಜ್ಯೂನಿಯರ್‌ ಕಾಲೇಜು ಮೈದಾನ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗುತ್ತಿದೆ ಅನ್ನೋ ಆರೋಪ ಕೂಡ ಕೇಳಿ ಬರ್ತಿದೆ.

ಇನ್ನು ನೂತನ ಶೌಚಾಲಯ ಕುರಿತಾಗಿ ಸ್ಥಳೀಯರು ಹೇಳೋದು ಹೀಗೆ. ಜೂನಿಯರ್‌ ಕಾಲೇಜು ಮೈದಾನಕ್ಕೆ ಪ್ರತಿನಿತ್ಯ ನೂರಾರು ಜನ ಬರ್ತಾರೆ, ಅವರಿಗೆ ಸರಿಯಾದ ಮೂಲಭೂತ ವ್ಯವಸ್ತೆ ಇಲ್ಲ. ಇತ್ತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶೌಚಾಲಯವನ್ನು ಕಟ್ಟಿದ್ದಾರೆ. ಆದ್ರೆ ಕಟ್ಟಿ ವರ್ಷಗಳೇ ಕಳೆದಿದ್ರು ಕೂಡ ಇನ್ನು ಓಪನ್‌ ಆಗಿಲ್ಲ. ಅಧಿಕಾರಿಗಳು ಇಲ್ಲಿ ನೆಪಮಾತ್ರಕ್ಕೆ ನಿರ್ಮಿಸಿದ್ದಾರೆ. ಇದ್ರಿಂದ ಯಾರಿಗೂ ಉಪಯೋಗವಾಗುತ್ತಿಲ್ಲ. ಇಲ್ಲಿಗೆ ಬರುವ ಸಾರ್ವಜನಿಕರು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ ಅಂತ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಜೂನಿಯರ್‌ ಕಾಲೇಜು ಮೈದಾನದಲ್ಲಿ ಶೌಚಾಲಯ ಇಲ್ಲದಿರುವುದರಿಂದ ಬಯಲಿನಲ್ಲೆ ಸಾರ್ವಜನಿಕರು ಶೌಚಕ್ಕೆ ಹೋಗುತ್ತಿದ್ದಾರೆ. ಈ ಕಾರಣಕ್ಕೆ ಹೈಸ್ಕೂಲ್‌ ಫೀಲ್ಡ್‌ ಗಬ್ಬೆದ್ದು ನಾರುವಂತಾಗಿದೆ.  ಶೌಚಾಲಯದ ಸಮಸ್ಯೆಯನ್ನು ಕುರಿತು ಹಲವು ಬಾರಿ ಕ್ರಡಾಪಟುಗಳು ಹಾಗೂ  ಸ್ಥಳೀಯರು  ಸಂಬಂಧಪಟ್ಟ  ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದ್ರೆ ಯಾವುದೇ ಕ್ರಮ ಕೈಗೊಂಡಿಲ್ಲವಂತೆ.  ವರ್ಷಗಳಿಂದಲೂ ಈ ಶೌಚಾಲಯಕ್ಕೆ ಬೀಗ ಜಡಿದಿದ್ದು, ಪಾಲಿಕೆಯು ಶೌಚಾಲಯವನ್ನು ಸಾರ್ವಜನಿಕ ಉಪಯೋಗಕ್ಕೆ ನೀಡುತ್ತಿಲ್ಲ. ಜೊತೆಗೆ ಸಾರ್ವಜನಿಕರ ಹಣ ಕೂಡ ಪೋಲಾಗುತ್ತಿದೆ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಪಾಲಿಕೆಯ ಅಧಿಕಾರಿಗಳು ಇತ್ತ ಗಮನಹರಿಸಿ ಶೌಚಾಲಯ ಓಪನ್‌ ಮಾಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews