CHIKKANAYAKANAHALLI NEWS : ರಾಜ್ಯಾದ್ಯಂತ ಬಕ್ರೀದ್ ಹಬ್ಬವನ್ನು ಮುಸ್ಲಿಂ ಶ್ರದ್ಧೆಯಿಂದ ಹಾಗೂ ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲೂ ಬಕ್ರೀದ್ ಹಬ್ಬದ ಸಡಗರ ವಾತಾವರಣ ಮನೆಮಾಡಿತು. ಸ್ಥಳೀಯ ಮುಸ್ಲಿಂ ಬಾಂಧವರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ, ತಮ್ಮ ಮನೆಗಳಲ್ಲಿ ಆತಿಥ್ಯತೆಯಿಂದ ಹಬ್ಬವನ್ನು ಸಂಭ್ರಮಿಸಿದರು.
ಈ ಹಬ್ಬದ ವಿಶೇಷ ಸಂದರ್ಭದಲ್ಲೇ, ಚಿಕ್ಕನಾಯಕನಹಳ್ಳಿಯ ಶಾಸಕರಾದ ಸುರೇಶ್ ಬಾಬು ಅವರು ಕೆಲ ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ತಮ್ಮ ಈ ಮಾನವೀಯ ನಡೆ ಮೂಲಕ ಅವರು ಧರ್ಮಾತೀತ ಒಗ್ಗಟ್ಟಿನ ಉದಾಹರಣೆಯಾಗಿ ಮೆಚ್ಚುಗೆ ಪಡೆದರು.
“ಬಕ್ರೀದ್ ಹಬ್ಬ ಮನುಷ್ಯತ್ವದ ಹಾಗೂ ದಾನಧರ್ಮದ ಪ್ರತೀಕ. ಈ ಹಬ್ಬದ ಸಾರಿ ಮುಸ್ಲಿಂ ಸಮಾಜ ಬಡವರು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ದೊಡ್ಡ ಪಾತ್ರವಹಿಸುತ್ತದೆ,” ಎಂದು ಶಾಸಕ ಸುರೇಶ್ ಬಾಬು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ತಮ್ಮ ನೆರೆಹೊರೆಯ ಬಡ ಕುಟುಂಬಗಳಿಗೆ ಮಾಂಸ, ಆಹಾರ ಸಾಮಗ್ರಿ ಹಾಗೂ ಬೇರೆ ಬೇರೆ ಸಹಾಯ ಹಸ್ತಗಳನ್ನು ವಿತರಿಸಿ, ಸಮಾಜದ ಒಳಿತಿಗೆ ತಮ್ಮ ಪಾತ್ರ ನಿರ್ವಹಿಸಿದರು. ಶಾಸಕರು ಈ ಕೆಲಸವನ್ನು ಶ್ಲಾಘಿಸುತ್ತಾ, ಮುಸ್ಲಿಂ ಸಮುದಾಯದ ಮಾನವೀಯತೆಯನ್ನು ಹೊಗಳಿದರು.
ಚಿಕ್ಕನಾಯಕನಹಳ್ಳಿಯಲ್ಲಿ ಶಾಸಕರ ಬೇಟಿಯು ಧರ್ಮಾತೀತ ಒಗ್ಗಟ್ಟಿಗೆ ಮತ್ತೊಂದು ನಿದರ್ಶನವಾಗಿದೆ. ಜನಪ್ರತಿನಿಧಿಯ ಈ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಬಲಿದಾನ, ಸಹಾನುಭೂತಿ ಹಾಗೂ ಸಹಬಾಳ್ವೆಯ ಸಂದೇಶವನ್ನೂ ನೀಡುತ್ತದೆ.