Madhugiri : ಮೀನು ಹಿಡಿಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು..!

MADHUGIRI : ಮೀನು ಹಿಡಿಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ತಂದೆ ದಾರುಣವಾಗಿ ಸಾವನ್ನಪಿದರೆ, ಮಗ ಬಚಾವ್‌ ಆಗಿರೋ ಘಟನೆ ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಮಳೆಗೆ ಕೆರೆ ಕಟ್ಟೆಗಳು ಭಾಗಶಃ ತುಂಬಿವೆ. ಹೀಗಾಗಿ ಕೆರೆ- ಕಟ್ಟೆಗಳಲ್ಲಿ ಮೀನುಗಳು ಹೆಚ್ಚಾಗಿದ್ದು, ಹೇಗಿದ್ದರೂ ಇವತ್ತು ಭರ್ಜರಿ ಮೀನೂಟ ತಿನ್ನೋಣ ಅಂತಾ ಮೀನು ಹಿಡಿಯಲು ಅಪ್ಪ- ಮಗ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿಯಲು ಹೋಗಿ ಅಪ್ಪ ಕಾಲು ಜಾರಿ ಕೆರೆಗೆ ಬಿದಿದ್ದು, ಉಸಿರುಗಟ್ಟಿ ಸಾವನ್ನಪ್ಪಿದರೆ, ಅದೃಷ್ಟವಶಾತ್‌ ಮಗ ಪಾರಾಗಿದ್ದಾನೆ.

ಇವತ್ತು ಭಾನುವಾರ ಶಾಲೆಗೆ ರಜೆ ಇದ್ದು, ಮಗ ಧನುಷ್‌ ಮೀನು ಹಿಡಿಯಲು ತಂದೆ ರಂಗನಾಥ್‌ ಜೊತೆ ಸಿಂಗನಹಳ್ಳಿ ಗ್ರಾಮದ ಗುಟ್ಟೆ ಕೆರೆಗೆ ಹೋಗಿದ್ದಾರೆ. ಕೆರೆಯಲ್ಲಿ ಮೀನು ಹಿಡಿಯಲು ತಂದೆ ರಂಗನಾಥ್‌ ಕೆರೆಗೆ ಇಳಿದಿದ್ದರು, ಈ ವೇಳೆ ಕಾಲು ಜಾರಿದ್ದು ನೀರಿನಲ್ಲಿ ಮುಳುಗಿದ್ದಾರೆ. ಅಪ್ಪ ರಂಗನಾಥ್‌ ಕೆರೆಯಲ್ಲಿ ಮುಳುಗುತ್ತಿದ್ದನ್ನು ಕಂಡ ಮಗ ಧನುಷ್‌ ಓಡೋಡಿ ಬಂದ ಗ್ರಾಮದ ಜನರಿಗೆ ತಿಳಿಸಿದ್ದಾನೆ. ಸ್ಥಳೀಯರು ಕೆರೆ ಬಳಿ ಬರುವವಷ್ಟರಲ್ಲಿ ತಂದೆ ರಂಗನಾಥ್‌ ಕೆರೆಯಲ್ಲಿ ಸಂಪೂರ್ಣವಾಗಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಹಾಗು ಅಗ್ನಿಶಾಮಕ ದಳ ಸಿಬ್ಬಂದಿ ರಂಗನಾಥ್‌ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನು ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು ಇದ್ದು, ಮನೆಗೆ ಆಧಾರವಾದ ಯಜಮಾನನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Author:

...
Sushmitha N

Copy Editor

prajashakthi tv

share
No Reviews