Kedarnath : ಕೇದಾರ್ ನಾಥ್ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್

KEDARNATH : ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಮತ್ತೊಮ್ಮೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಪ್ರಸಿದ್ಧ ಕೇದಾರ್ ನಾಥ್ ಹೆದ್ದಾರಿಯಲ್ಲಿ ಸಿರ್ಸಿಯಿಂದ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಆಗಿದೆ. ಹೆಲಿಕಾಪ್ಟರ್, ಹೆಲಿಪ್ಯಾಡ್ ಬದಲು ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಆಗಿದ್ದು, ಪ್ರಯಾಣಿಕರು ಮತ್ತು ಪೈಲಟ್ ಅಪಾಯದಿಂದ ಪಾರಾಗಿದ್ದಾರೆ.

ಕ್ರಿಸ್ಟಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್‌ ಇದಾಗಿದ್ದು, ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಈ ವೇಳೆ, ಒಂದು ಕಾರಿಗೆ ಹಾನಿಯಾಗಿದೆ. ಈ ಹಿಂದೆ ಮೇ 8 ರಂದು ಉತ್ತರಕಾಶಿಯ ಗಂಗಾನಿಯಲ್ಲಿ ಹೆಲಿಕಾಪ್ಟರ್ ಅಪಘಾತವಾಗಿ ಪೈಲಟ್ ಮತ್ತು 6 ಯಾತ್ರಿಕರು ಮೃತಪಟ್ಟಿದ್ದರು. ಏರೋಟ್ರಾನ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್‌ ಆಗಿತ್ತು.

ಇಂತಹ ಅಪಘಾತಗಳು ಯಾತ್ರಾ ಸೌಲಭ್ಯಗಳ ಸುರಕ್ಷತೆ ಬಗ್ಗೆ ಜನರಲ್ಲಿ ಆತಂಕ ಉಂಟುಮಾಡಿವೆ. ಅಧಿಕಾರಿಗಳು ಈ ಪ್ರಕರಣದ ಕುರಿತಾಗಿ ತನಿಖೆ ಆರಂಭಿಸಿದ್ದು, ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದಾರೆ

Author:

...
Sushmitha N

Copy Editor

prajashakthi tv

share
No Reviews