ಬೆಂಗಳೂರು : ಪ್ರತಿ ತಾಲೂಕಿನಲ್ಲೂ ಖರೀದಿ ಕೇಂದ್ರ ಸ್ಥಾಪನೆಗೆ ಕರ್ನಾಟಕ ಹೈಕೋರ್ಟ್ ಆದೇಶ

ಬೆಂಗಳೂರು: ರಾಜ್ಯದ ರೈತರ ಪರವಾಗಿ ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್, ಪ್ರತಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಟ ಬೆಂಬಲ ಬೆಲೆಯ (MSP) ಖರೀದಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಇಂದು ಸೂಚನೆ ನೀಡಿದೆ.

ರೈತ ಸೇನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಮೇಲಿನ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ನೇತೃತ್ವದ ವಿಭಾಗೀಯ ಪೀಠ, ರೈತರ ಬಿಕ್ಕಟ್ಟನ್ನು ಮನಗಂಡು ಈ ಆದೇಶ ನೀಡಿದೆ.

ಪೀಠದ ಆದೇಶದ ಮುಖ್ಯ ಅಂಶಗಳೆಂದರೆ:

  • ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು.
  • ಜಿಲ್ಲಾಧಿಕಾರಿಗಳು ತಮ್ಮ ಪ್ರಾದೇಶಿಕ ಮಟ್ಟದಲ್ಲಿ ಬೆಳೆಗಳ ಲಭ್ಯತೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಬೇಕು.
  • ಅಗತ್ಯವಿದ್ದಷ್ಟುವರೆಗೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಕನಿಷ್ಟ ಬೆಂಬಲ ಬೆಲೆಯ ಭದ್ರತೆ ನೀಡಬೇಕು.
  • ನಿಗದಿತ ಅವಧಿಯು ಸಾಕಷ್ಟು ವಿಸ್ತಾರ ಹೊಂದಿಲ್ಲದ ಕಾರಣ, ಖರೀದಿ ಅವಧಿಯನ್ನು ಕನಿಷ್ಠ 2 ತಿಂಗಳು ಹೆಚ್ಚಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಈ ಆದೇಶದಿಂದ ರಾಜ್ಯದ ರೈತರು ತಮ್ಮ ಬೆಳೆದ ಬೆಳೆಗಳನ್ನು ನ್ಯಾಯಸಮ್ಮತ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಮಧ್ಯವರ್ತಿಗಳ ಲಾಭದಾಟ ತಡೆಯಲು ಸಾಧ್ಯವಾಗಲಿದೆ.

Author:

...
Sushmitha N

Copy Editor

prajashakthi tv

share
No Reviews