ಶಿರಾ : ಸರ್ಕಾರಿ ಶಾಲೆಗೆ ಮಗನನ್ನು ಸೇರಿಸಿದ ನ್ಯಾಯಾಧೀಶೆ ಝರೀಫ ಬಾನು

ಶಿರಾ : ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಅದ್ರಲ್ಲೂ ಸ್ವಲ್ಪ ಶ್ರೀಮಂತಿಕೆ ಇದೆ ಅಂದ್ರೆ ಇತ್ತ ಮೂಸಿಯು ನೋಡಲ್ಲ. ಜನ ಇಂಗ್ಲೀಷ್‌ ಮೀಡಿಯಂ ಓದಿಸಿದ್ರೆ ನಮ್ಮ ಮಕ್ಕಳಿಗೆ ಭವಿಷ್ಯ ಅಂತಾರೆ, ಅಂತಹ ಮನಸ್ಥಿತಿ ಇರೋರಿಗೆ ತಿರುಗೇಟು ನೀಡುವಂತೆ ಶಿರಾದಲ್ಲಿ ನ್ಯಾಯಾದೀಶರೊಬ್ಬರು ತಮ್ಮ ಮಗನನ್ನು ಸರ್ಕಾರಿ ಕನ್ನಡ ಮಾದರಿ ಶಾಲೆಗೆ ಸೇರಿಸಿ ಮಾದರಿಯಾಗಿದ್ದಾರೆ.

ಶಿರಾ ನಗರದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ಝರೀಫ ಬಾನು  ಅವರ ಪುತ್ರ ಆಜಾದ್ ಆರ್. ಜೆಡ್ ರನ್ನು ನಗರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 5ನೇ ತರಗತಿಗೆ ದಾಖಲು ಮಾಡಿದ್ದಾರೆ. ಆ ಮೂಲಕ ಸರ್ಕಾರಿ ಶಾಲೆ ಅಂದ್ರೆ ಮುಖ ತಿರುಗಿಸೋರಿಗೆ ಚಾಟಿ ಬೀಸಿದ್ದಾರೆ. ಈ ಸರ್ಕಾರಿ ಶಾಲೆಯಲ್ಲಿ 350 ಕಿಂತ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಎಲ್‌ ಕೆ ಜಿ ಯಿಂದ 7ನೇ ತರಗತಿವರೆಗೆ ತರಗತಿಗಳು ನಡೆಯುತ್ತವೆ. ಇನ್ನು ಈ ಶಾಲೆಯಲ್ಲಿ ಇಂಗ್ಲೀಷ್‌, ಕನ್ನಡ ಮೀಡಿಯಂ ಎರಡು ಇವೆ. ಪಿಎಂಶ್ರೀ ಶಾಲೆಯು ಸ್ವಾತಂತ್ರ ಪೂರ್ವದ ಶಾಲೆಯಾಗಿದ್ದು, 1903ರಲ್ಲಿ ಪ್ರಾರಂಭವಾಗಿದೆ. ಇತ್ತ ನ್ಯಾಯಾದೀಶರು ಮಾಡಿರುವ ಕಾರ್ಯಕ್ಕೆ ತಾಲೂಕಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

Author:

...
Keerthana J

Copy Editor

prajashakthi tv

share
No Reviews