TUMAKURU NEWS : ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯರಾದ ಸಚಿವ ಸತೀಶ್ ಜಾರಕಿಹೊಳಿ, ಇಂದು ತುಮಕೂರಿನ ತನ್ನ ಸಂಪುಟ ಸಹೋದ್ಯೋಗಿ ಸಚಿವ ಕೆ.ಎನ್. ರಾಜಣ್ಣರವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಕೆಎನ್ ರಾಜಣ್ಣ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಪ್ರಸ್ತುತ ಮನೆಮಟ್ಟದ ವಿಶ್ರಾಂತಿಯಲ್ಲಿ ಇದ್ದಾರೆ. ಈ ವಿಚಾರ ತಿಳಿದ ಸತೀಶ್ ಜಾರಕಿಹೊಳಿ ಅವರು, ಬೆಂಗಳೂರಿನಿಂದ ಬೆಳಗಾವಿಗೆ ತೆರಳುವ ಮಾರ್ಗದಲ್ಲಿ ತುಮಕೂರಿಗೆ ಬಂದ ಅವರು ನೇರವಾಗಿ ರಾಜಣ್ಣರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಬೆಳಿಗ್ಗೆ ನಡೆದ ಈ ಭೇಟಿಯಲ್ಲಿ, ಸುಮಾರು ಅರ್ಧ ಗಂಟೆಗಳ ಕಾಲ ಇಬ್ಬರು ಸಚಿವರು ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ರಾಜಕೀಯ, ಆಡಳಿತಾತ್ಮಕ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆ ಚರ್ಚೆಯಾದಂತೆಯೇ ಹೇಳಲಾಗುತ್ತಿದೆ.