TUMAKURU : ರೈತರಿಗೆ ಗುಡ್‌ ನೈಸ್‌ | PMKSY ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

TUMAKURU NEWS : ತುಮಕೂರು ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (PMKSY) ಸೂಕ್ಷ್ಮ ಹನಿ ನೀರಾವರಿ ಘಟಕಗಳನ್ನು ಅಡಿಕೆ ಹೊರತುಪಡಿಸಿ ಇತರ ತೋಟಗಾರಿಕೆ ಬೆಳೆಗಳಿಗೆ ಅಳವಡಿಸಲು ಸಹಾಯಧನ ಸೌಲಭ್ಯ ಕಲ್ಪಿಸಲಾಗಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ರೈತರು ನೀರಿನ ಸಮರ್ಪಕ ಬಳಕೆ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಲು ನೆರವಾಗಲಿದೆ. ಹನಿ ನೀರಾವರಿಯು ಒಟ್ಟಾರೆ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಇಲಾಖೆ ತಿಳಿಸಿದೆ.

* ಯೋಜನೆಯ ಪ್ರಮುಖ ಅಂಶಗಳು:

ಪ್ರತಿ ಫಲಾನುಭವಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ, ತರಕಾರಿ ಹಾಗೂ ಹೂವಿನ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಅನುಮತಿ
ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ರೈತರಿಗೆ ಶೇ.90ರಷ್ಟು ಸಹಾಯಧನ
ನಂತರದ 3 ಹೆಕ್ಟೇರ್ ವರೆಗೆ ಎಲ್ಲಾ ರೈತರಿಗೆ ಶೇ.45ರಷ್ಟು ಸಹಾಯಧನ
ಹಳೆಯ ಘಟಕ ಹಾಳಾದ ಬಳಿಕ 7 ವರ್ಷಗಳ ನಂತರ ಅದೇ ಜಮೀನಿಗೆ ಮತ್ತೆ ಸಹಾಯಧನ ದೊರೆಯುವ ವ್ಯವಸ್ಥೆ
* ಆದ್ಯತೆ ಫಲಾನುಭವಿಗಳಿಗೆ:

ಪರಿಶಿಷ್ಟ ಜಾತಿ, ಪಂಗಡ, ಮಹಿಳೆ, ಅಲ್ಪಸಂಖ್ಯಾತರು ಮತ್ತು ವಿಕಲಚೇತನರಿಗೆ ಆದ್ಯತೆ
* ಅರ್ಜಿ ಸಲ್ಲಿಕೆ:

ಹತ್ತಿರದ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ತೋಟಗಾರಿಕೆ ಇಲಾಖೆಯಿಂದ ಅನುಮೋದಿತ ಕಂಪನಿಗಳಿಂದ ಮಾತ್ರ ಹನಿ ನೀರಾವರಿ ಘಟಕ ಅಳವಡಿಸಬೇಕು
* ತಾಲೂಕುವಾರು ಸಂಪರ್ಕ ಸಂಖ್ಯೆ (ತುಮಕೂರು ಜಿಲ್ಲೆ):

ತುಮಕೂರು: 0816-2279705
ಗುಬ್ಬಿ: 08131-222659
ಕುಣಿಗಲ್: 08132-221981
ತಿಪಟೂರು: 08134-251424
ಚಿ.ನಾ.ಹಳ್ಳಿ: 08133-267457
ತುರುವೇಕೆರೆ: 08139-288350
ಶಿರಾ: 08135-295530
ಕೊರಟಗೆರೆ: 08138-232920
ಮಧುಗಿರಿ: 08137-282417
ಪಾವಗಡ: 08136-244064

 

Author:

...
Keerthana J

Copy Editor

prajashakthi tv

share
No Reviews