CHIKKABALLAPURA : ವೀಕೆಂಡ್‌ಗೆ ನಂದಿಬೆಟ್ಟಕ್ಕೆ ಹೋಗೋಕು ಮುನ್ನ ಈ ಸ್ಟೋರಿ ನೋಡಿ

CHIKKABALLAPURA NEWS : ನಂದಿಬೆಟ್ಟ [NANDI HILLS] ಹೋಗಬೇಕು ಅಂತ ಪ್ಲಾನ್‌ ಮಾಡಿದ್ರೆ, ಈಗ್ಲೇ ಪ್ಲಾನ್‌ ಮುಂದೂಡಿ. ವಿಕೇಂಡ್‌ ಬಂತು ಅಂತ ನಂದಿಬೆಟ್ಟಕ್ಕೆ ಹೋಗಿ ಪುಲ್‌ ಎಂಜಾಯ್‌ ಮಾಡೋಣ ಅಂದುಕೊಂಡ್ರೆ ನೋ ವೇ, ಚಾನ್ಸೆ ಇಲ್ಲ ಅಂದುಕೊಂಡು ಬಿಡಿ. ಯಾಕಂದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ತೆರಳಲು ಮುಂದಾಗುತ್ತಿರುವ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. ಪ್ರವಾಸಿಗರ ನೆಚ್ಚಿನ ತಾಣವಾದ ನಂದಿ ಬೆಟ್ಟಕ್ಕೆ ಐದು ದಿನಗಳ ಕಾಲ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ.

ಜೂನ್ 19 ರಂದು ನಂದಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ  ನಡೆಸಲು ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಜೂನ್‌ 19 ರಿಂದ ಜೂನ್‌ 20 ರವರೆಗೆ ಪ್ರವಾಸಿಗರಿಗೆ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹಾಕಿದೆ. ಅಷ್ಟೇ ಅಲ್ಲ, ನಂದಿ ಬೆಟ್ಟದ ಮೇಲಿನ ಅತಿಥಿ ಗೃಹಗಳ ಕಾರ್ಯಚಟುವಟಿಕೆಗಳಿಗೂ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

ಜೂನ್ 17 ರಿಂದ 19ರವರೆಗೆ ವಸತಿ ಕೊಠಡಿಗಳ ಬುಕಿಂಗ್‌ಗಳನ್ನು ರದ್ದುಪಡಿಸಲಾಗಿದೆ. ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ  ಹಾಗೂ ಕುಶಾಲ್ ಚೌಕ್ಸೆ ಆದೇಶ ಹೊರಡಿಸಿದ್ದು, ಸಾರ್ವಜನಿಕರು ಈ ಅವಧಿಯಲ್ಲಿ ನಂದಿ ಬೆಟ್ಟಕ್ಕೆ ಬರಬಾರದೆಂದು ಮನವಿ ಮಾಡಿಕೊಂಡಿದ್ದಾರೆ. ಇತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಆದೇಶ ತಿಳಿದ ಪ್ರವಾಸಿಗರು ವಿಕೇಂಡ್‌ ಎಂಜಾಯ್‌ಗೆ ಇಲ್ಲ ಅಂತ ಬೇಸರ ಗೊಂಡಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews