NANDIHILLS : ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಸರ್ಕಾರ ಸಚಿವ ಸಂಪುಟ ಸಭೆಯನ್ನು ಮಾಡಲು ನಿರ್ಧರಿಸಿತ್ತು. ಅದರಂತೆ ನಂದಿಗಿರಿ ಧಾಮದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ನಡೆಸುತ್ತಿತ್ತು. ಈ ಕಾರಣಕ್ಕೆ ಪ್ರವಾಸಿಗರಿಗೆ 5 ದಿನಗಳವರೆಗೆ ನಿಷೇಧವನ್ನು ಕೂಡ ಏರಿತ್ತು. ಇತ್ತ ನಂದಿಬೆಟ್ಟದಲ್ಲಿ ರಸ್ತೆ ರಿಪೇರಿ, ಮೀಟಿಂಗ್ ನಡೆಸುವ ಸ್ಥಳಕ್ಕೆ ಸುಣ್ಣ ಬಳಿಸುವ ಕಾರ್ಯವನ್ನು ಕೂಡ ಭರದಿಂದ ಮಾಡುತ್ತಿತ್ತು. ಆದ್ರೆ ಇದೀಗ ನಾಳೆ ನಡೆಯಬೇಕಿದ್ದ ಸಚಿವ ಸಂಪುಟ ಸಭೆಗೆ ಸಡನ್ ಬ್ರೇಕ್ ಹಾಕಿದೆ ಸರ್ಕಾರ.
ಇತ್ತ ಭೋಗನಂದೀಶ್ವರ ದೇವಸ್ಥಾನದಲ್ಲಿ ಸಿದ್ದತೆ ಮಾಡಿಕೊಂಡಿತ್ತು ಜಿಲ್ಲಾಡಳಿತ. ನಂದಿಬೆಟ್ಟದಲ್ಲಿ ಸಚಿವ ಸಂಪುಟ ನಡೆಸುವ ಕಾರಣ ಕಳೆದ 10 ದಿನಗಳಿಂದ ಪರಿಶೀಲನೆ ನಡೆಸಿ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿತ್ತು. ಸ್ಥಳಕ್ಕೆ ಎಂ.ಸಿ. ಸುಧಾಕರ್ ಕೂಡ ಭೇಟಿ ನೀಡಿ ಪರೀಶೀಲನೆ ನಡೆಸಿದ್ದರು. ಸಿದ್ಧತೆಯ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಕೂಡ ಪಡೆದಿದ್ರು . ಆದ್ರೆ ಇದೀಗ ದಿಢೀರನೆ ಸಭೆಗೆ ಬ್ರೇಕ್ ಹಾಕಿ ಸಭೆಯನ್ನು ವಿಧಾನಸೌಧಕ್ಕೆ ಶಿಪ್ಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.