TUMAKURU NEWS : ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ "ಎಕ್ಕ" ಸಿನಿಮಾದ ತಂಡ ಇಂದು ಚಿತ್ರದ ಪ್ರಚಾರಕ್ಕಾಗಿ ತುಮಕೂರಿಗೆ ಭೇಟಿ ನೀಡಿದೆ. ನಾಯಕ ಯುವರಾಜ್ ಕುಮಾರ್ ಮತ್ತು ನಾಯಕಿ ಸಂಜನಾ ಆನಂದ್ ನೇತೃತ್ವದ ತಂಡ, ಮಹತ್ವಪೂರ್ಣ ಪ್ರವಾಸದ ಭಾಗವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದರು.
ಪ್ರಮುಖ ಧಾರ್ಮಿಕ ಕೇಂದ್ರವಾದ ಸಿದ್ದಗಂಗಾ ಮಠದಲ್ಲಿ ಆಶೀರ್ವಾದ ಪಡೆದ ನಂತರ, ಚಿತ್ರತಂಡವು ನಗರದ ವಿದ್ಯಾವಾಹಿನಿ ಕಾಲೇಜುಕ್ಕೆ ಭೇಟಿ ನೀಡಲಿದೆ. ಚಿತ್ರ ಪ್ರಚಾರದ ಭಾಗವಾಗಿ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಯಕ-ನಾಯಕಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಚಿತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇನ್ನು "ಎಕ್ಕ" ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರ ಕುಟುಂಬದ ಸದಸ್ಯರಾಗಿರುವ ಯುವರಾಜ್ ಕುಮಾರ್ ನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ. ಸಿನಿಮಾ ಈ ವರ್ಷ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಪರಿಗಣಿತವಾಗಿದೆ. ವಿಭಿನ್ನ ಥೀಮ್ ಮತ್ತು ತೀವ್ರತೆಯ ಕಥಾವಸ್ತು ಹೊಂದಿರುವ ಎಕ್ಕ ಚಿತ್ರಕ್ಕೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಬಲವಿದೆ.
ಇನ್ನು ಎಕ್ಕ ಚಿತ್ರದ ನಿರ್ದೇಶಕರು, ನಿರ್ಮಾಪಕರು, ಹಾಗೂ ತಂತ್ರಜ್ಞರ ತಂಡವೂ ಈ ಸಂದರ್ಭದಲ್ಲಿ ತುಮಕೂರಿಗೆ ಆಗಮಿಸಿದ್ದರು. ಇನ್ನು ಈ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.