ದೇವನಹಳ್ಳಿ : ಗನ್ ನಿಂದ ಫೈರಿಂಗ್ ಮಾಡಿಕೊಂಡು ಯುವಕ ಆತ್ಮಹತ್ಯೆ

ದೇವನಹಳ್ಳಿ :

ಸಿಂಗಲ್‌ ಬ್ಯಾರಲ್‌ ಗನ್‌ ನಿಂದ ಯುವಕನೋರ್ವ ಫೈರಿಂಗ್‌ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಬೈಯೇಶ್‌ ಎಂಬಾತ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.

ಇಂದು ಮುಂಜಾನೆ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿರುವ ಅವರ ಫಾರ್ಮ್‌ ಹೌಸ್‌ ನಲ್ಲಿ ಬೈಯೇಶ್‌ ತನ್ನ ತಂದೆಯ ಸಿಂಗಲ್‌ ಬ್ಯಾರಲ್‌ ಗನ್‌ ನಿಂದ ಫೈರಿಂಗ್‌ ಮಾಡಿಕೊಂಡು ಸಾವಿಗೀಡಾಗಿದ್ದಾನೆ. ಮನೆಯವರೆಲ್ಲ ತಿರುಪತಿಗೆ ಹೋಗಿದ್ದಾಗ ಈತ ಏಕಾಏಕಿ ಫೈರಿಂಗ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರು ಇಂದು ಮುಂಜಾನೆ ವಾಪಸ್‌ ಬಂದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಇನ್ನು ಈತ ಇತ್ತೀಚೆಗಷ್ಟೇ ತಾನೇ ವಿದೇಶದಲ್ಲಿ  ವಿದ್ಯಾಭ್ಯಾಸ ಮುಗಿಸಿ ಮನೆಗೆ ಬಂದಿದ್ದ ಎನ್ನಲಾಗ್ತಿದೆ.

ಸದ್ಯ ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews