ಮಧುಗಿರಿ : ಮಧುಗಿರಿ ಪಟ್ಟಣದ ಮೇವನರೆಡ್ಡಿ ಸಮುದಾಯ ಭವನದಲ್ಲಿ ರೆಡ್ಡಿ ಸಮುದಾಯದ ಎಸ್ಎಲ್ ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯ್ತು. ಈ ಬಾರಿಯ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಮಧುಗಿರಿ ತಾಲೂಕಿಗೆ ಹೆಮ್ಮೆ ತಂದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ, ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದ್ರು. ಈ ವೇಳೆ ಮಾತನಾಡಿದ ರೆಡ್ಡಿ ಸಂಘದ ಅಧ್ಯಕ್ಷರಾದ ಪಾಂಡುರಂಗ ರೆಡ್ಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮುಂದಿನ ವರ್ಷದಿಂದ ನಿರಂತರ ವಾಗಿ ನಡೆಸಲಾಗುವುದು. ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಉನ್ನತ ಶಿಕ್ಷಣ ಹೊಡೆಯುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಉದ್ದೇಶ ಗೊಂದಲಾಗಿದೆ ಎಂದು ತಿಳಿಸಿದ್ರು.
ವಕೀಲರ ಸಂಘದ ಅಧ್ಯಕ್ಷ ಪಿಸಿ ಕೃಷ್ಣಾರೆಡ್ಡಿ ಮಾತನಾಡಿ, ಇತಿಹಾಸದಲ್ಲಿ ರೆಡ್ಡಿ ಜನಾಂಗದ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಯಾಗುತ್ತಿದ್ದು ತಾಲೂಕಿಗೆ ಗೌರವ ತಂದಿದ್ದಾರೆ. ವಿದ್ಯಾರ್ಥಿಗಳು ಗುರಿ ಸಾಧಿಸಲು ಸಂಘ ಸದಾ ನಿಮ್ಮ ಹಿಂದೆ ಇರುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳು ದೇಶಕ್ಕೆ ಸಮಾಜಕ್ಕೆ ನೀವೇ ಮಾಡುವ ಅವಕಾಶ ಬರಲಿ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದರು.
ಇನ್ನು ಈ ವೇಳೆ ರೆಡ್ಡಿ ಜನಸಂಘದ ಪದಾಧಿಕಾರಿಗಳಾದ ಸುರೇಶ್ ರೆಡ್ಡಿ, ವೆಂಕಟ ಕೃಷ್ಣ ರೆಡ್ಡಿ, ಮೋಹನ್ ಕುಮಾರ್ ರೆಡ್ಡಿ ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.