TUMAKURU : ಕಮಿಷನರ್ ದಯಾನಂದ್ ತಲೆದಂಡ | ತುಮಕೂರಿನಲ್ಲಿ ಪ್ರತಿಭಟಿಸಿ ಆಕ್ರೋಶ

TUMAKURU NEWS : ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತ ವೇಳೆ 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ರು. ದುರಂತದ ಬಳಿಕ ಬೆಂಗಳೂರು ಕಮಿಷನರ್‌ ಸೇರು ಅನೇಕ ಮಂದಿ ಅಧಿಕಾರಿಗಳನ್ನು ಅಮಾನತಿ ಮಾಡಿತ್ತು. ದಕ್ಷ ಅಧಿಕಾರಿಯಾಗಿದ್ದ ದಯಾನಂದ್‌ ಅಮಾನತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇತ್ತ ತುಮಕೂರಿನಲ್ಲೂ ದಯಾನಂದ್‌ ಅಮಾನತು ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಯ್ತು.

ನಗರದ ಟೌನ್‌ಹಾಲ್‌ ಸರ್ಕಲ್‌ನಲ್ಲಿ ಜಮಾಯಿಸಿದ ನಾಯಕ ಸಮಾಜ ಒಕ್ಕೂಟದ ಮುಖಂಡರು, ಟೌನ್‌ಹಾಲ್‌ ಸರ್ಕಲ್‌ನಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಬಳಿಕ ಜಿಲ್ಲಾಧಿಕಾರಿ ಮುಂದೆ ಸಿಎಂ, ಡಿಸಿಎಂ, ಗೃಹ ಸಚಿವರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ದುರಂತದ ಬಗ್ಗೆ ನೈತಿಕ ಹೊಣೆಯೊತ್ತು ರಾಜೀನಾಮೆ ಕೊಡಬೇಕಿದ್ದ ಸಿಎಂ, ಡಿಸಿಎಂ ಅಧಿಕಾರಿಗಳನ್ನು ತಲೆದಂಡ ಮಾಡಿರೋದು ಖಂಡನೀಯ. ಕೂಡಲೇ ದಯಾನಂದ್‌ ಅವರ ಅಮಾನತನ್ನು ವಾಪಸ್‌ ಪಡೆಯುವಂತೆ ನಾಯಕ ಸಮಾಜದ ಮುಖಂಡರು ಆಗ್ರಹಿಸಿದ್ರು.

ಈ ವೇಳೆ ಮಾತನಾಡಿದ ನಾಯಕ ಸಮಾಜ ಒಕ್ಕೂಟದ ಮುಖಂಡ ಭಾನುಪ್ರಕಾಶ್‌ ಮಾತನಾಡಿ, ದಯಾನಂದ್‌ ಅವರು ಬೆಂಗಳೂರು ಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಹಿಡಿತ ಸಾಧಿಸಿ, ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ರು. ಅಂತಹವರನ್ನು ಸರ್ಕಾರ ಅಮಾನತು ಮಾಡಿರೋದು ಖಂಡನೀಯ. ಈ ಕೂಡಲೇ ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.

ಕಾಲ್ತುಳಿತ ದುರಂತ ವಿಚಾರ ಜಟಾಪಟಿ ತಾರಕ್ಕೇರುತ್ತಿದೆ.  ದಕ್ಷ ಅಧಿಕಾರಿ ಅಂತಾನೇ ಹೆಸರುವಾಸಿಯಾಗಿರೋ ದಯಾನಂದ್‌ ಅಮಾನತು ಆದೇಶವನ್ನು ಸರ್ಕಾರ ವಾಪಸ್‌ ಪಡೆಯುತ್ತಾ ಎಂದು ಕಾದುನೋಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews