ಚಿಕ್ಕನಾಯಕನಹಳ್ಳಿ : ಅಧಿಕಾರಿಗಳಿಂದ ರೈತನಿಗೆ ದೋಖಾ? ಮಂಜೂರಾದ್ರು ಕೈಗೆ ಸಿಗದ ಟ್ರ್ಯಾಕ್ಟರ್ !

ಕೃಷಿ ಇಲಾಖೆಯ ಅಧೀಕ್ಷಕರಾದ ಉಮೇಶ್ ಅವರ ಕಂದಿಕೆರೆ ಮನೆಮುಂದೆ ಟ್ರಾಕ್ಟರ್‌ ನಿಲ್ಲಿಸಿರುವುದು.
ಕೃಷಿ ಇಲಾಖೆಯ ಅಧೀಕ್ಷಕರಾದ ಉಮೇಶ್ ಅವರ ಕಂದಿಕೆರೆ ಮನೆಮುಂದೆ ಟ್ರಾಕ್ಟರ್‌ ನಿಲ್ಲಿಸಿರುವುದು.
ತುಮಕೂರು

ಚಿಕ್ಕನಾಯಕನಹಳ್ಳಿ : ಪಿಎಂ ಕಿಸಾನ್‌ ಯೋಜನೆಯಡಿ ರೈತರು ಟ್ರ್ಯಾಕ್ಟರ್‌ ಸೇರಿ ಬೇಸಾಯದ ಉಪಕರಣಗಳನ್ನು ಕೊಳ್ಳಲು ಅವಕಾಶ ಇದೆ. ಈ ಯೋಜನೆಯಡಿ ರೈತರು ಟ್ರ್ಯಾಕ್ಟರ್‌ ಖರೀದಿ ಮಾಡಿ, ಅರ್ಧದಷ್ಟು ಹಣವನ್ನು ರೈತರು ಕಟ್ಟಿದರೆ, ಉಳಿದ ಹಣವನ್ನು ಸರ್ಕಾರ ಸಬ್ಸಿಡಿ ಹೆಸರಲ್ಲಿ ಕೊಡುತ್ತೆ. ಆದರೆ ಇಲ್ಲೊಬ್ಬ ರೈತನಿಗೆ ಟ್ರ್ಯಾಕ್ಟರ್‌ ಕೊಂಡು ವಂಚನೆಗೆ ಒಳಗಾದ ಪ್ರಸಂಗ ಎದುರಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದಿಗನಡು ಗ್ರಾಮದ ರೈತ ಜಯರಾಮಯ್ಯ ಎಂಬುವವರು ಸುಮಾರು 7 ವರ್ಷಗಳ ಹಿಂದೆ ಕಿಸಾನ್‌ ಯೋಜನೆಯಡಿ ಟ್ರ್ಯಾಕ್ಟರ್‌ ಖರೀದಿಗೆ ಮುಂದಾಗಿದ್ದು, ಎಲ್ಲಾ ದಾಖಲೆಗಳನ್ನು ನೀಡಿ ಸಹಿ ಹಾಕಿ ಕೊಟ್ಟಿದ್ದರು. ಆದರೆ ದಾಖಲೆ ನೀಡಿದರೂ ಕೂಡ ಈವರೆಗೂ ಟ್ರ್ಯಾಕ್ಟರ್‌ ನೀಡಿಲ್ಲ. ಈ ಬಗ್ಗೆ ಎರಡು ಬಾರಿ ದೂರು ಕೂಡ ಕೊಟ್ಟಿದ್ದೇನೆ, ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಟ್ರ್ಯಾಕ್ಟರ್‌ ಖರೀದಿ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಜವರಯ್ಯ ಪುತ್ರ ಕಾಂತರಾಜು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದ್ದಾರೆ, ಮಾಹಿತಿ ಹಕ್ಕಿನಲ್ಲಿ ಈಗಾಗಲೇ ಕಿಸಾನ್‌ ಯೋಜನೆಯಡಿ ಟ್ರ್ಯಾಕ್ಟರ್‌ ನೀಡಲಾಗಿದ್ದು, ಆ ಟ್ರ್ಯಾಕ್ಟರ್‌ನನ್ನು ಚಿಕ್ಕನಾಯಕನಹಳ್ಳಿ ಕೃಷಿ ಇಲಾಖೆಯ ಅಧೀಕ್ಷಕರಾದ ಉಮೇಶ್ ಅವರ ಕಂದಿಕೆರೆ ಮನೆಯ ಮುಂದೆ ನಿಲ್ಲಿಸಲಾಗಿದೆ ಎಂದು ದಾಖಲೆ ಸಮೇತ ರೈತ ಕಾಂತರಾಜು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ರೈತ ಜಯರಾಮಯ್ಯ ಹೆಸರಿಗೆ ಮಂಜೂರಾದ ಟ್ರ್ಯಾಕ್ಟರ್‌ನನ್ನು ಕೊಡದೇ ಅಧಿಕಾರಿಗಳೇ ವಂಚನೆ ಮಾಡಿದ್ದು ಸೂಕ್ತ ಕ್ರಮ ಕೈಗೊಂಡು, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews