ಚಿಕ್ಕಮಗಳೂರು: ಸುತ್ತಿಗೆಯಿಂದ ಅತ್ತೆಯ ತಲೆಗೆ ಹೊಡೆದು ಕೊಲೆ | ಅಳಿಯ ಎಸ್ಕೇಪ್..!

ಕೊಲೆ ಆರೋಪಿ ಶಶಿಧರ್
ಕೊಲೆ ಆರೋಪಿ ಶಶಿಧರ್
ಚಿಕ್ಕಮಗಳೂರು

ಚಿಕ್ಕಮಗಳೂರು:

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್‌ ಗ್ರಾಮದಲ್ಲಿ ತಲೆಗೆ ಸುತ್ತಿಗೆಯಿಂದ ಹೊಡೆದು ಅಳಿಯನೋರ್ವ ಅತ್ತೆಯನ್ನೇ ಹತ್ಯೆಗೈದಿರುವ ಘಟನೆ ಭಾನುವಾರ ನಡೆದಿದೆ.

ಕೊಲೆಯಾದ ಮಹಿಳೆ ಯಮುನಾ (65) ಮೃತ ದುರ್ದೈವಿಯಾಗಿದ್ದು. ಹತ್ಯೆಗೈದ ಆರೋಪಿಯನ್ನು ಆಕೆಯ ಅಳಿಯ ಶಶಿಧರ್‌ ಎಂದು ಗುರುತಿಸಲಾಗಿದೆ. ಜಗಳದ ವೇಳೆ ತನ್ನ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ,‌ ಇನ್ನು ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಈ ಘಟನೆಯು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Author:

share
No Reviews