Chikkaballapura : ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ | ಟಿಎಚ್ಒ ನೇ ಮೇನ್ ಕಿಂಗ್ ಪಿನ್

CHIKKABALLAPURA : ಆಸ್ಪತ್ರೆ ಅಂದರೆ ಪ್ರಾಣ ಉಳಿಸೋ ದೇವಾಲಯ ಅಂತಾನೇ ಜನರು ಭಾವಿಸಿರೋದು. ಆದರೆ ಇಲ್ಲಿ ದುಡ್ಡು ಕೊಟ್ಟರೆ ಅಷ್ಟೇ ಜನರಿಗೆ ಆರೋಗ್ಯ ಸೇವೆಯ ಭಾಗ್ಯ ಸಿಗೋದು ಅನ್ನುವಂತಾಗಿದೆ. ಹೌದು ಸ್ವತಃ ಟಿಎಚ್‌ಒ ಅವರೇ ಈ ಲಂಚವಾತಾರದ ಕಿಂಗ್‌ಪಿನ್‌ ಆಗಿದ್ದು, ಎಗ್ಗಿಲ್ಲದೇ ಭ್ರಷ್ಟಾಚಾರ ನಡೆಯುತ್ತಿದ್ದು ಬಡ ರೋಗಿಗಳು ಚಿಕಿತ್ಸೆಗಾಗಿ ಅಲೆದಾಡುವಂತಾಗಿದೆ, ಅಷ್ಟಕ್ಕೂ ಈ ಲಂಚವಾತಾರ ನಡೆಯುತ್ತಿರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ.

ದುಡ್ಡು ಇರೋರು ಖಾಸಗಿ ಹಾಸ್ಪಿಟಲ್‌ಗೆ ಹೋಗಿ ಟ್ರೀಟ್‌ಮೆಂಟ್‌ ತಗೋತ್ತಾರೆ. ಆದರೆ ಬಡವರು ಎಲ್ಲಿಗೆ ಹೋಗಬೇಕು, ಹೇಳಿ ಕೇಳಿ ಬಡವರಿಗಾಗಿಯೇ ಸರ್ಕಾರಿ ಆಸ್ಪತ್ರೆಗಳು ಇರೋದು ಆದರೆ ಕೆಲ ಸರ್ಕಾರಿ ಆಸ್ಪತ್ರೆಗಳು ಬಡ ರೋಗಿಗಳ ರಕ್ತವನ್ನು ಹೀರುತ್ತಿವೆ. ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ನಿತ್ಯ ನೂರಾರು ಮಂದಿ ರೋಗಿಗಳು ಚಿಕಿತ್ಸೆಗಾಗಿ ಬರ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ಆಪರೇಷನ್‌ ಮಾಡಿಸಬೇಕಂದರೆ  ಸಾವಿರಾರು ರೂಪಾಯಿ ಲಂಚ ಕೊಡಬೇಕಂತೆ. ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಟಿಎಚ್‌ಒ ನರಸಿಂಹಮೂರ್ತಿಯೇ ರೋಗಿಗಳಿಂದ ಲಂಚ ಸ್ವೀಕರಿಸ್ತಾ ಇದ್ದು, ಪ್ರತಿ ಆಪರೇಷನ್‌ಗೆ ಸುಮಾರು 15 ಸಾವಿರ ರೂಪಾಯಿ ಲಂಚ ಪಡಿತ್ತಾರಂತೆ. ಬಡ ರೋಗಿಗಳು ಎಲ್ಲಿ ಹೋಗಬೇಕೆಂದು ಜನರು ಆಕ್ರೋಶ ಹೊರಹಾಕ್ತಿದ್ದಾರೆ.

ಇನ್ನು ಟಿಎಚ್‌ಒ ನರಸಿಂಹಮೂರ್ತಿ ಕಳೆದ 10 ವರ್ಷದಿಂದಲೂ ಒಂದೇ ಸ್ಥಳದಲ್ಲಿ ಅಧಿಕಾರಿಯಾಗಿದ್ದು, ಇವರ ಲಂಚವಾತಾರದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ಯೋ..? ಅಥವಾ ಇಲ್ವೋ ಗೊತ್ತಿಲ್ಲ ಅಥವಾ ಈ ಬಗ್ಗೆ ಗೊತ್ತಿದ್ರು ಅಧಿಕಾರಿಗಳು ಮೌನವಾಗಿದ್ದಾರೋ ಅದು ಗೊತ್ತಿಲ್ಲ. ಸದ್ಯ ಟಿಎಚ್‌ಒ ನರಸಿಂಹಮೂರ್ತಿಯ ಲಂಚಾವತಾರದ ವಿಡಿಯೋ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವೈರಲ್‌ ಆಗ್ತಿದ್ದು, ಇನ್ನಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ..? ಅಥವಾ ಈ ಲಂಚವತಾರ ಹೀಗೆ ಮುಂದುವರೆಯಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews