SIRA : ವ್ಯಾಪಾರಸ್ಥರು-ಸಿಬ್ಬಂದಿಗಳ ಗಲಾಟೆ | T.B JAYACHANDRA ಸಂಧಾನ ಸಭೆ

SIRA NEWS : ರಾಷ್ಟ್ರೀಯ ಹೆದ್ದಾರಿ [National Highway] ಶಿರಾದ  ಕರೇಜವನಹಳ್ಳಿ ಟೋಲ್ ಗೇಟ್‌ನಲ್ಲಿ ವ್ಯಾಪಾರ  ವಿಚಾರದಲ್ಲಿ ಸ್ಥಳೀಯರು ಮತ್ತು ಟೋಲ್ ಸಿಬ್ಬಂದಿ ನಡುವೆ ಜಟಾಪಟಿ ಏರ್ಪಟ್ಟಿತ್ತು. ತಮಗೆ ವ್ಯಾಪಾರ ಮಾಡಲು ಟೋಲ್‌ ಸಿಬ್ಬಂದಿ ಅಡ್ಡಿಪಡಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರು ಶಾಸಕರಿಗೆ ಮನವಿ ಮಾಡಿದ್ರು. ಈ ವಿಚಾರವಾಗಿ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ.ಟಿ.ಬಿ.ಜಯಚಂದ್ರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಿತು.

ಕರೇಜವನಹಳ್ಳಿ ಟೋಲ್ ಗೇಟ್‌ ಬಳಿ ವ್ಯಾಪಾರಿಗಳು ದಿನವಹಿ ಹಣ್ಣು, ತರಕಾರಿ, ಹೂವು. ನೀರು ಸೇರಿದಂತೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕಳೆದ ವಾರ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ವಾಹನ ಹರಿದು ಮೃತಪಟ್ಟಿದ್ರು. ಈ  ವಿಚಾರದಲ್ಲಿ ಟೋಲ್ ಅಡಳಿತ ಮಂಡಳಿ ವ್ಯಾಪಾರಕ್ಕೆ ನಿರ್ಬಂಧ ಹೇರಿತ್ತು. ಇತ್ತ ವ್ಯಾಪಾರಕ್ಕೆ ಅವಕಾಶ ಕೊಟ್ಟಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಳವಾಗಿದೆ. ಅತ್ತ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಆ ಕಾರಣಕ್ಕೆ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡುವಂತಿಲ್ಲ ಎಂದು ತಿಳಿಸಿತ್ತು.

ಈ ವಿಚಾರವಾಗಿ ವ್ಯಾಪಾರಸ್ಥರು ಶಾಸಕ ಟಿ.ಬಿ.ಜಯಚಂದ್ರ ಅವರ ಬಳಿ ತಮ್ಮ ಅಹವಾಲು ಸಲ್ಲಿಸಿದ್ರು. ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಕರೇಜವನಹಳ್ಳಿ ಟೋಲ್‌ ಗೆ ಭೇಟಿ ನೀಡಿದ್ರು. ಟೋಲ್ ಅಡಳಿತ ಮತ್ತು ವ್ಯಾಪಾರಿಗಳು ಸಮಸ್ಯೆಗಳನ್ನು ಆಲಿಸಿ, ಕೆಲವು ಮಾರ್ಗಸೂಚಿ ವ್ಯವಸ್ಥೆ ಮಾಡಿ, ವ್ಯಾಪಾರ ವಹಿವಾಟು ನಡೆಸಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ರು. ಈ ಸಂದರ್ಭದಲ್ಲಿ ಟೋಲ್ ಅಡಳಿತ ಅಧಿಕಾರಿಗಳು, ಶಿರಾ ಗ್ರಾಮಾಂತರ ಪಿಎಸ್‌ಐ ಶ್ರೀನಿವಾಸ್‌ ಸೇರಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗ ಹಾಜರಿದ್ರು.

 

 

Author:

...
Keerthana J

Copy Editor

prajashakthi tv

share
No Reviews