ರಾಯಚೂರು : ಭಾರೀ ಮಳೆಗೆ ಸೇತುವೆ ಮುಳುಗಡೆ

ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತೀವ್ರ ಮಳೆಯಿಂದಾಗಿ ಮಾನ್ವಿ ತಾಲೂಕಿನ ದೋತರಬಂಡಿ ಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗಿ, ಬೃಹತ್ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನಲೆಯಲ್ಲಿ, ಸೇತುವೆಯಲ್ಲಿ ಕಂಡುಬರದ ಗುಂಡಿಗೆ ಬೈಕ್ ಸವಾರರು ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಗಾಯಗೊಂಡವರನ್ನು ಸ್ಥಳೀಯರು ಕೂಡಲೇ ರಕ್ಷಿಸಿದ್ದು, ಅದೃಷ್ಠವಶಾತ್ ಸಾವು ತಪ್ಪಿದೆ.

ಹಳ್ಳದಲ್ಲಿ ಬಿದ್ದ ಬೈಕ್ಗಳನ್ನು ಗ್ರಾಮಸ್ಥರು ಜೆಸಿಬಿಯಿಂದ ಹೊರತೆಗೆದಿದ್ದು, ಘಟನೆಯ ತೀವ್ರತೆ ಎಲ್ಲರ ಕಣ್ಣು ತೆರೆದಂತಾಗಿದೆ. ಇನ್ನು ಈ ಸೇತುವೆ ಪ್ರತಿವರ್ಷ ಮಳೆಯಾದಾಗ ಮುಳುಗಡೆಯಾಗಿ, ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗುತ್ತದೆ. ಈ ಬಾರಿ ಕೂಡ ಉಟಕನೂರು, ಬೆಳವಟ ಮತ್ತು ದೋತರಬಂಡಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

 

Author:

...
Keerthana J

Copy Editor

prajashakthi tv

share
No Reviews