ಮಂಡ್ಯ : ಮಳೆಯಿಂದ ಮರ ಉರುಳಿ ದೇವಾಲಯದ ಗೋಪುರ ಮತ್ತು ವಿಗ್ರಹಕ್ಕೆ ಹಾನಿ

ಮಂಡ್ಯ : ಮಂಡ್ಯದಲ್ಲಿ ಸತತ ಮಳೆಯ ಪರಿಣಾಮ ಪಾಂಡವಪುರ ತಾಲೂಕು ಚಿಕ್ಕಮರಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಗ್ರಾಮದ ಪ್ರಸಿದ್ಧ ಚೆನ್ನಿಗರಾಯ ದೇಗುಲದ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ದೇವಾಲಯದ ಗೋಪುರ ಹಾಗೂ ಒಳಗಿನ ವಿಗ್ರಹಗಳಿಗೆ ಗಂಭೀರ ಹಾನಿ ಉಂಟಾಗಿದೆ.

ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದ ಚಿಕ್ಕಮರಳಿ ಗ್ರಾಮದ ಪ್ರಸಿದ್ಧ ಚೆನ್ನಿಗರಾಯ ದೇಗುಲ ಮತ್ತೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಗೋಪುರದ ಶಿಖರ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ವಿಗ್ರಹಗಳ ಮೇಲೂ ಮರದ ಬೃಹತ್ ಅಂಗಾಂಶಗಳು ಬಿದ್ದಿವೆ. ಈ ಪರಿಣಾಮವಾಗಿ ಕೆಲವು ವಿಗ್ರಹಗಳು ಭಿನ್ನವಾಗಿವೆ ಎಂದು ವರದಿಯಾಗಿದೆ.

ಈ ಅಘಾತದ ದೃಶ್ಯವನ್ನು ನೋಡಿದ ಗ್ರಾಮಸ್ಥರು ದುಃಖ ವ್ಯಕ್ತಪಡಿಸುತ್ತಾ, ಇದು ಯಾವದೋ ಕೆಟ್ಟ ಮುನ್ಸೂಚನೆಯಾಗಿರಬಹುದೆ? ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ದೇವಾಲಯವು ಗ್ರಾಮದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದ ಕಾರಣ, ಈ ಘಟನೆ ಗ್ರಾಮಸ್ಥರ ಭಾವನೆಗಳಿಗೆ ಆಘಾತ ತಂದಿದೆ.

ಇನ್ನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಅಂದಾಜು ಹಾಗೂ ಮರ ಬಿದ್ದು ಬಿದ್ದಿರುವ ಕಾರಣಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. 

 

Author:

...
Keerthana J

Copy Editor

prajashakthi tv

share
No Reviews