MADHUGIRI NEWS : ಅನಾರೋಗ್ಯ ಹಾಗೂ SSLC ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಬಾಲಕನೋರ್ವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಪಟ್ಟಣದ ಕಪ್ಪಣ್ಣ ಬೀದಿಯ ವಾಸಿಯಾದ ಸತೀಶ್ ಕುಮಾರ್ ಹಾಗೂ ಲಕ್ಷ್ಮೀ ದಂಪತಿಗಳ ಮಗನಾದ 16 ವರ್ಷದ ಅಕ್ಷಯ್ ನೇಣಿಗೆ ಶರಣಾದ ಬಾಲಕ. ಅಕ್ಷಯ್ ಪಟ್ಟಣದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದ. ಮೊದಲ ಬಾರಿಗೆ 4 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ. ಮರು ಪರೀಕ್ಷೆಯಲ್ಲಿ 2 ವಿಷಯದಲ್ಲಿ ಪಾಸಾಗಿದ್ದು, ಮತ್ತೆ ಅನುತ್ತೀರ್ಣನಾಗಿದ್ದ. ಅಲ್ಲದೆ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಬಾಲಕನಿಗೆ ಫಿಡ್ಸ್ ಬರುತ್ತಿತ್ತು, ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಸೋಮವಾರ ತಂದೆ ಜಮೀನಿಗೆ ಹೋಗಿದ್ದಾರೆ. ಇತ್ತ ತಾಯಿ ಬಾಲ್ಯಾ ಗ್ರಾ.ಪಂ.ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದು, ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಒಬ್ಬನೇ ಇದ್ದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಬಾಲಕ ಅಕ್ಷಯ್ ಹೆತ್ತವರಿಗೆ ಒಬ್ಬನೇ ಮಗನಾಗಿದ್ದು, ಪೋಷಕರ ಆಕ್ರಂದನ ಹೇಳತೀರದ್ದಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.