Belagavi : ಐಪಿಎಲ್ ಚಾನ್ಸ್ ಕೊಡಿಸ್ತೀವಿ ಎಂದು ಯುವ ಕ್ರಿಕೆಟಿಗನಿಗೆ 23 ಲಕ್ಷ ದೋಖಾ

BELAGAVI : ಸಮಾಜದಲ್ಲಿ ಜನರು ಹಣ ಸಂಪಾದನೆಗಾಗಿ ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ದರೋಡೆ, ಕಳ್ಳತನ, ಸುಲಿಗೆ, ಕೊಲೆ ಮಾಡಲು ಮುಂದಾಗಿದ್ದಾರೆ. ಸೈಬರ್‌ ವಂಚನೆಗಳು ಕೂಡ ಜಾಸ್ತಿ ಆಗ್ತಿವೆ. ಈ ಕಾರಣಕ್ಕೆ ಕೆಲವೊಂದು ಆಪ್‌ ಬಳಸುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಅಂತ ಪೊಲೀಸರು ಪ್ರಕಟಣೆಗಳನ್ನು ಹೊರಡಿಸುತ್ತಾರೆ. ಆದರೂ ಈ ಸುಲಿಗೆ ನಿಲ್ಲುತ್ತಿಲ್ಲ. 

ಬೆಳಗಾವಿಯಲ್ಲಿ ವಾಸವಿದ್ದ ಯುವ ಕ್ರಿಕೆಟ್‌ ಆಟಗಾರ ರಾಕೇಶ್‌ ಗೆ ಕ್ರಿಕೆಟ್‌ ಅಂದರೆ ಎಲ್ಲಿಲ್ಲದ ಪ್ರೀತಿ, ತಾನು ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸ್ಸು ಕಂಡಿದ್ದ. ಈ ಕಾರಣಕ್ಕೆ ಕ್ರಿಕೆಟ್‌ ಕೂಡ ಪ್ರಾಕ್ಟೀಸ್‌ ಮಾಡ್ತಿದ್ದ. ಕ್ರಿಕೆಟ್‌ ಆಡಲು ಹೈದರಬಾದ್‌ ಗೆ ಹೋಗಿದ್ದ ರಾಕೇಶ್‌, ತಾನು ಕ್ರಿಕೆಟ್‌ ಆಡುತ್ತಿದ್ದದ್ದನ್ನು ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದ. ಖದೀಮರು ಅದೇಗೋ ರಾಕೇಶ್‌ ಬಗ್ಗೆ ತಿಳಿದುಕೊಂಡು ಸೋಷಿಯಲ್‌ ಮೀಡೊಯಾದಲ್ಲಿ ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ.

ಇತ್ತ ನಾರ್ಮಲ್‌ ಆಗಿ ಯಾರೋ ಪ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ ಅಂತ ರಾಕೇಶ್‌ ಓಕೆ ಕೊಟ್ಟಿದ್ದ. ಹೀಗೆ ಪರಿಚಯ ಮಾಡಿಕೊಂಡ ಖದೀಮರು ಯುವ ಆಟಗಾರ ರಾಕೇಶ್‌ ಜೊತೆ ಆತ್ಮೀಯವಾಗಿ ವರ್ತಿಸಿದ್ದಾರೆ. ಆದರೆ ಖದೀಮರ ನಾಟಕ ಅರಿಯದ ರಾಕೇಶ್‌ ಅವರ ಮಾತುಗಳಿಗೆ ಮರುಳಾಗಿದ್ದಾನೆ. ನಾವು ಕೂಡ ಕ್ರಿಕೆಟ್‌ ಪ್ರೇಮಿಗಳೇ ನಮಗೆ ದೊಡ್ಡ ದೊಡ್ಡ ಕಾಂಟ್ಯಾಕ್ಟ್‌ ಇದೇ ಅಂತ ಬೊಗಳೆ ಬಿಟ್ಟಿದ್ದಾರೆ. ಅವರೊಂದಿಗೆ ರಾಕೇಶ ಕೂಡ ಸ್ನೇಹ ಬೆಳೆಸಿದ್ದಾನೆ.

ರಾಕೇಶ್‌ ಸಂಬಂಧ ಗಟ್ಟಿಯಾಗುತ್ತಿದ್ದಂತೆ ನಿನಗೆ ನಾವು ಐಪಿಎಲ್‌ನಲ್ಲಿ ರಾಜಸ್ಥಾನ್‌ ತಂಡದಲ್ಲಿ ಆಟವಾಡಲು ಅವಕಾಶ ಕಲ್ಪಿಸಿಕೊಡುತ್ತೇವೆ ಎಂದು ನಂಬಿಸಿದ್ದಾರೆ. ರಾಕೇಶ್‌ ದೃಢವಾಗಿ ನಂಬಲೇಬೇಕು ಅನ್ನೋ ಕಾರಣಕ್ಕೆ ಡಮ್ಮಿ ದಾಖಲೆಗಳನ್ನು ಕಳುಹಿಸಿದ್ದಾರೆ. ದಾಖಲೆಗಳು ಫೇಕ್‌ ಅಂತ ತಿಳಿಯದ ರಾಕೇಶ್‌ ಅವರ ಮಾತಿಗೆ ಮರುಳಾಗಿದ್ದಾನೆ. ತಂಡದಲ್ಲಿ ಚಾನ್ಸ್‌ ಕೊಡಿಸಲು ಆ ಫೀಸ್‌, ಈ ಫೀಸ್‌ ಅಂತ ಹಣದ ಬೇಡಿಕೆ ಇಟ್ಟಿದ್ದಾರೆ ವಂಚಕರು. ರಾಕೇಶ್‌ ಬಳಿಯಿಂದ ಸತತವಾಗಿ ಪೋನ್‌ ಪೇ ಮೂಲಕ ಒಟ್ಟು 23 ಲಕ್ಷ ರೂಪಾಯಿ ವಂಚಿಸಿದ್ದಾರೆ. ವಂಚಕರ ಮಾತು ನಂಬಿದ ರಾಕೇಶ್‌ಗೆ ತಾನು ವಂಚನೆಗೊಳಗಾಗುತ್ತಿದ್ದೇನೆ ಅನ್ನೋದು ಅರಿವಿಗೆ ಬಂದಿಲ್ಲ.

ರಾಕೇಶ್‌ ಬಳಿ ಬರೋಬ್ಬರಿ 23 ಲಕ್ಷ ಹಣ ದೋಚಿದವರು. ರಾಕೇಶ್‌ ತಾನು ವಂಚನೆಗೆ ಒಳಗಾಗುತ್ತಿದ್ದೇನೆ ಎಂದು ತಿಳಿದೊಡನೇ ಬೆಳಗಾವಿ ಸಿಇಎನ್ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಸೈಬರ್‌ ಪ್ರಕರಣ ದಾಖಲಿಸಿಕೊಂಡು ದಾಖಲೆ ಪರಿಶೀಲಿಸಿ ಖತರ್ನಾಕ್‌ ಕಳ್ಳರಿಗೆ ಬಲೆ ಬೀಸಿದ್ದರು. ರಾಕೇಶ್‌ ಗೆ ಯಾಮಾರಿಸಿ ಹಣ ಪೀಕಿದ್ದ ಇಬ್ಬರು ಸೈಬರ್‌ ವಂಚಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶದ ಸುಲ್ತಾನಪುರಕ್ಕೆ ತೆರಳಿದ್ದ ಪೊಲೀಸರು ಆರೋಪಿ ಸುಸಂಜನ್ ಮತ್ತು ದಿವಾಕರ್ ಬಂಧಿಸಿ ಕರೆತಂದು ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಆರೋಪಿಗಳನ್ನು ಶಿಪ್ಟ್‌ ಮಾಡಿದ್ದಾರೆ.

ಇಂತಹ ಸೈಬರ್‌ ವಂಚನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಪದೇ ಪದೇ ಪೊಲೀಸ್‌ ಇಲಾಖೆಯುವ ಹಲವು ರೀತಿಯ ಸೈಬರ್‌ ವಂಚನೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುತ್ತಿದೆ. 

 

Author:

...
Sushmitha N

Copy Editor

prajashakthi tv

share
No Reviews