ಶಿರಾ : ಸಂಜೆ ಆಗುತ್ತಿದ್ದಂತೆ ಬಸ್‌ಗಳೇ ಬರಲ್ಲ | ಶಿರಾ ಪ್ರಯಾಣಿಕರು ಸುಸ್ತೋ ಸುಸ್ತು

ಶಿರಾ : ಶಿರಾ ನಗರ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ನಾನಾ ಉದ್ಯಮಗಳು ಇರುವುದರ ಜೊತೆಗೆ ಉತ್ತರ ಕರ್ನಾಟಕ ಜಿಲ್ಲೆಗೆ ಸಂಪರ್ಕ ಕಲ್ಪಿಸು ತಾಲೂಕಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕೂಡ ಸುಸರ್ಜಿತವಾಗಿ ವಿಶಾಲವಾಗಿದೆ. ಆದರೆ ಎಲ್ಲಾ ಸೌಕರ್ಯಗಳಿದ್ರೂ ಕೂಡ ಸಂಜೆ ಆಗುತ್ತಿಂದ್ದಂತೆ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಗೆ ಬರ ಬರುತ್ತೆ. ಇದರಿಂದ ಪ್ರಯಾಣಿಕರು ಬಸ್‌ಗಳಿಗೆ ಕಾಯ್ದು ಕಾಯ್ದು ಸುಸ್ತಾಗುತ್ತಿದ್ದಾರೆ.

ಶಿರಾದ ಸುತ್ತಮುತ್ತಲ ಹಳ್ಳಿಯ ಜನರು ನಿತ್ಯ ಕೆಲಸ, ಶಾಲಾ-ಕಾಲೇಜುಗಳಿಗೆ ಬೆಂಗಳೂರು, ತುಮಕೂರು ಕಡೆ ಸಾವಿರಾರು ಪ್ರಯಾಣಿಕರು ಓಡಾಡುತ್ತಾರೆ. ಇತ್ತ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಕಡೆಗೂ ನೂರಾರು ಮಂದಿ ಪ್ರಯಾಣ ಬೆಳೆಸುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಕನಿಷ್ಠ 15 ನಿಮಿಷಕ್ಕಾದ್ರೂ ಒಂದೊಂದು ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ಮಾಡುತ್ತದೆ. ಆದ್ರೆ ಸಂಜೆ ಆಗ್ತಿದ್ದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಬಾರದೇ, ಹೈವೇಯಲ್ಲೇ ಹಾದು ಹೋಗೋದ್ರಿಂದ ಮಹಿಳೆಯರು, ಮಕ್ಕಳು ಬಸ್‌ ನಿಲ್ದಾಣದಲ್ಲಿ ಪರದಾಡುಂತಾಗಿದೆ.

ಇನ್ನು ರಾತ್ರಿ ವೇಳೆ ಬಸ್‌ ನಿಲ್ದಾಣದಲ್ಲಿ ಬಸ್‌ ಬಾರದಿರೋದ್ರಿಂದ ವಯಸ್ಸಾದವರು, ಮಕ್ಕಳು, ರೋಗಿಗಳನ್ನು ಕರೆದೊಯ್ಯಲು ಗಂಟೆಗಟ್ಟಲೆ ಬಸ್‌ಗಳಿಗೆ ಕಾಯುವ ಸ್ಥಿತಿ ಎದುರಾಗಿದೆ. ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಿಗೆ ಬಂದು ಹೋಗಬೇಕು ಎಂಬ ಆದೇಶ ಇದ್ರೂ ಕೂಡ ಆದೇಶ ಕೇವಲ ಪ್ರತಿಯಾಗಿದ್ದು, ಕಾರ್ಯರೂಪಕ್ಕೆ ಬರ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

 

 

Author:

...
Keerthana J

Copy Editor

prajashakthi tv

share
No Reviews