TUMAKURU : ಲಾರಿ - ಬೈಕ್‌ ನಡುವೆ ಅಪಘಾತ | 3 ಬೈಕ್‌ ಸವಾರರು ಸ್ಥಳದಲ್ಲೇ ಸಾವು

TUMAKURU NEWS :ಕಂಟೇನರ್‌ ಲಾರಿ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ತಾಲೂಕಿನ ನಂದಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ವವರನ್ನು ರಾಜೇಶ್‌, ಧನಂಜಯ್‌ ಮತ್ತು ಧನುಶ್‌ ಎಂದು ಗುರುತಿಸಲಾಗಿದೆ.

ಮೃತರು ದಾಬಸ್‌ಪೇಟೆಯ ಎಂ.ಇ.ಸೋಲಾರ್‌ ಪ್ಲಾಂಟ್‌ನಲ್ಲಿ ಟ್ರೈನಿ ಇಂಜಿನಿಯರ್‌ಗಳಾಗಿ ಕೆಲಸ ಮಾಡ್ತಿದ್ದು, ರಾತ್ರಿಪಾಳಿಯ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ತುಮಕೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ಕಂಟೇನರ್‌ ಲಾರಿಯೊಂದು ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಧನುಷ್ ಗೌಡ ಹಾಗೂ ರಾಕೇಶ್‌ ಗುಬ್ಬಿ ತಾಲೂಕಿನವರಾಗಿದ್ದಾರೆ. ಧನರಾಜು ಮೇಗಳ ಮನೆ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲೂಕಿನ ಚಿಕ್ಕಚೆಲ್ಲೂರು ಗ್ರಾಮದವರಾಗಿದ್ದಾರೆ. ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡು ಹೆತ್ತವರ ಆಕ್ರಂಧನ ಮುಗಿಲುಮುಟ್ಟಿದೆ. ಎದೆ ಎತ್ತರದ ಮಗ ಇಂದು ಅಫಘಾತದಲ್ಲಿ ಸಾವನ್ನಪ್ಪಿದ್ದು ಧಿಕ್ಕೆ ತೋಚದೇ ಕಂಗಾಲಾಗಿದ್ಧಾರೆ.

ಇನ್ನು ಮಕ್ಕಳ ಅಗಲಿಕೆಯ ನಡುವೆಯೂ ಮೃತರ ಕಣ್ಣುಗಳ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಇದ್ರಿಂದ ಕಣ್ಣಿಲ್ಲದವರಿಗೆ ದಾನ ಮಾಡುವ ಮೂಲಕ ದೃಷ್ಟಿ ಕೊಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.  ವೈದ್ಯರು ಪರೀಕ್ಷೆ ನಡೆಸಿದ ಬಳಿಕ ನೇತ್ರದಾನ ಮಾಡಲಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತುಮಕೂರು ಎಸ್‍ಪಿ ಅಶೋಕ್‌, ಎಎಸ್‌ಪಿ ಗೋಪಾಲ್, ಡಿವೈಎಸ್‌ಪಿ. ಚಂದ್ರಶೇಖರ್  ಮತ್ತು  ಕ್ಯಾತ್ಸಂದ್ರ ಸಿಪಿಐ ರಾಮ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಮುಂದುವರೆದಿದೆ.

Author:

...
Keerthana J

Copy Editor

prajashakthi tv

share
No Reviews