ಮಂಡ್ಯ : ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು

ಮಂಡ್ಯ : ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿಯಾಗಿತ್ತು. ಘಟನೆ ಮಾಸುವ ಮುನ್ನವೇ  ಮಂಡ್ಯ ಜಿಲ್ಲೆಯ ಮಿಮ್ಸ್ಆಸ್ಪತ್ರೆಯಲ್ಲಿ ಮತ್ತೊಂದು ಶೋಕಾಂತ ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ಕೇವಲ 7 ವರ್ಷದ ಪುಟ್ಟ ಬಾಲಕಿ ಸಾವಿಗೀಡಾದ ಘಟನೆ ಒಂದು ಕುತೂಹಲಕತ್ತಲೆಯನ್ನೇ ಮೂಡಿಸಿದೆ. ನೆಲ್ಲೂರು ಗ್ರಾಮದ ಸಾನ್ವಿ ಎಂಬ 7 ವರ್ಷದ ಮಗು, ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದಾಳೆ ಎನ್ನಲಾಗಿದೆ.

ಮೇ 29 ರಂದು ಸಾನ್ವಿ ಅವರ ಕಾಲಿಗೆ ಟೈಲ್ಸ್ ಬಿದ್ದು ಮೂಳೆ ಮುರಿದ ಹಿನ್ನೆಲೆಯಲ್ಲಿ, ತಂದೆ ನಿಂಗರಾಜು ಅವರು ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ರಾತ್ರಿ ಆಪರೇಷನ್ ಮಾಡಲಾಗುತ್ತಿದ್ದು, ತಕ್ಷಣವೇ ವಾರ್ಡ್ಗೆ ಶಿಫ್ಟ್ ಮಾಡಲಾಗುತ್ತದೆ.

ಆದರೆ ಶುಕ್ರವಾರದ ಬೆಳಗ್ಗೆ ಸಾನ್ವಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಶನಿವಾರ ಡ್ರಿಪ್ ಮೂಲಕ ಔಷಧಿ ನೀಡಿದ ತಕ್ಷಣವೇ ಬಾಲಕಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ಅವಸರದಲ್ಲಿಯೇ ಚಿಕಿತ್ಸೆ ಮುಂದುವರಿಸಿದರೂ, ಶನಿವಾರ ರಾತ್ರಿ 10:30 ಗಂಟೆಗೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆ ತಿಳಿಸಿದೆ.

ಮಗುವಿನ ಮೃತ್ಯುವಿನ ಬಗ್ಗೆ ವೈದ್ಯರು ಮಾಹಿತಿ ನೀಡುವ ಮುನ್ನವೇ, ಪೊಲೀಸರು ಆಸ್ಪತ್ರೆಗೆ ಬಂದು ಪೋಷಕರಿಗೆ ಮಾಹಿತಿ ನೀಡಿದರೆಂದು ಆರೋಪಿಸಲಾಗಿದೆ. "ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ನೀಡಲಾಗಿದೆ, ಅದೇ ನನ್ನ ಮಗಳ ಸಾವಿಗೆ ಕಾರಣ" ಎಂದು ಪೋಷಕರಿಂದ ಗಂಭೀರ ಆರೋಪ ಕೇಳಿಬಂದಿದೆ.

ಇನ್ನು ಮೃತ ಬಾಲಕಿಯ ಪೋಷಕರ ಪ್ರಶ್ನೆಗಳಿಗೆ ಮಿಮ್ಸ್ RMO ಡಾ. ದರ್ಶನ್ ನೀಡಿದ ಪ್ರತಿಕ್ರಿಯೆ ಇನ್ನಷ್ಟು ಕೋಪ ಉಂಟುಮಾಡಿದೆ. "ಅಂಗಾಂಗ ವೈಫಲ್ಯದಿಂದ ಮಗು ಸಾವನ್ನಪ್ಪಿದೆ. ಬೇಕಾದರೆ ತನಿಖೆ ಮಾಡಿಸಿಕೊಳ್ಳಿ" ಎಂಬ ಬೇಜವಾಬ್ದಾರಿ ಉತ್ತರ ನೀಡಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

Author:

...
Keerthana J

Copy Editor

prajashakthi tv

share
No Reviews