TUMAKURU: ಉಗ್ರರ ದುಷ್ಕೃತ್ಯದ ವಿರುದ್ಧ ತುಮಕೂರಿನಲ್ಲಿ ಯೂತ್‌ ಕಾಂಗ್ರೆಸ್‌ ಪ್ರೊಟೆಸ್ಟ್‌

ತುಮಕೂರು: 

ಕಾಶ್ಮೀರದ ಪುಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ತುಮಕೂರು ನಗರದಲ್ಲಿ ಯೂತ್‌ ಕಾಂಗ್ರೆಸ್‌ ವತಿಯಿಂದ  ಪ್ರತಿಭಟನೆ  ನಡೆಸಲಾಯ್ತು. ನಗರದ ಟೌನ್‌ಹಾಲ್‌ನಿಂದ ಭದ್ರಮ್ಮ ಚೌಟ್ರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ರು.  ಯುವ ಕಾಂಗ್ರೆಸ್‌ ಅಧ್ಯಕ್ಷ ನಿಖಿಲ್‌ ರಾಜಣ್ಣ ನೇತೃತ್ವದಲ್ಲಿ ನೂರಾರು ಮಂದಿ ಯುವ ಕಾಂಗ್ರೆಸ್‌ ಕಾರ್ಯಕರ್ತರು  ಪ್ರತಿಭಟನೆಯಲ್ಲಿ  ಭಾಗಿಯಾಗಿ ಉಗ್ರರ ಕೃತ್ಯವನ್ನು ಖಂಡಿಸಿದರು.

ನಗರದ ಟೌನ್‌ಹಾಲ್‌ ಸರ್ಕಲ್‌ನಿಂದ ಭದ್ರಮ್ಮ ಚೌಟ್ರಿವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆಸಲಾಗಿದ್ದು, ದೇಶದಲ್ಲಿ ಇಂಟಲಿಜೆನ್ಸ್‌ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ  ದೃಷ್ಕೃತ್ಯ  ಎಸಗಿದವರ  ವಿರುದ್ಧ ಕ್ರಮ  ಕೈಗೊಳ್ಳುವ  ಮೂಲಕ  ಉಗ್ರರಿಗೆ  ತಕ್ಕ ಪಾಠ ಕಲಿಸುವಂತೆ ಆಗ್ರಹಿಸಿದರು.

Author:

...
Keerthana J

Copy Editor

prajashakthi tv

share
No Reviews