ಗುಬ್ಬಿ : ರಾಜೀನಾಮೆ ಕೊಡೋದು ಬಿಡೋದು ನನ್ನಿಷ್ಟ. ಅವ್ನು ಯಾವನೋ ಹೇಳ್ದಾ ಅಂತಾ ನಾನು ರಾಜೀನಾಮೆ ಕೊಡೋಕೆ ಆಗಲ್ಲ. ಅವನ್ಯಾರು ರಾಜೀನಾಮೆ ಕೊಡು ಅಂತ ನನ್ನ ಹೇಳೋಕೆ. ನನ್ನ ಜನ ನನಗೆ ಓಟ್ ಹಾಕಿ ಗೆಲ್ಲಿಸಿದ್ದಾರೆ. ಅವರು ನನ್ನ ರಾಜೀನಾಮೆ ಕೇಳಲಿ ಕೊಡ್ತಿನಿ ಅಂತ ಬಿಜೆಪಿ ಮುಖಂಡ ದಿಲೀಪ್ ವಿರುದ್ಧ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ವಾಗ್ದಾಳಿ ನಡಸಿದ್ದಾರೆ.
ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆ ಅನುದಾನದಲ್ಲಿ 50 ಲಕ್ಷ ರೂಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಯಾರಿಗೂ ತಾಲೂಕನ್ನು ಅಡವಿಟ್ಟಿಲ್ಲ. ಇವರ ಎಂ.ಪಿ ಸೋಮಣ್ಣ ಯಾಕೆ ತಾಲೂಕನ್ನ ಯಾರಿಗೋ ಅಡವಿಟ್ಟಿರಬಾರದು ಎಂದು ಪ್ರಶ್ನಿಸಿದ್ರು. ಅವರ ಎಂ.ಪಿ ಕೂಡ ಹೇಮಾವತಿ ಬಗ್ಗೆ ಹೋರಾಟ ಮಾಡಬೇಕಲ್ಲವೇ, ಯಾಕೆ ಮಾಡುತ್ತಿಲ್ಲ. ಜನ ಅವರಿಗೂ ವೋಟು ಹಾಕಿಲ್ಲವೇ. ಅವರನ್ನ ಕೇಳೋ ಧೈರ್ಯ ಇಲ್ಲದೆ ನನ್ನ ಬಗ್ಗೆ ಮಾತನಾಡುತ್ತಾನೆ. ಜನಕ್ಕೆ ಅನುಕೂಲ ಆಗುವ ರೀತಿಯಲ್ಲಿ ಹೋರಾಟ ಮಾಡಿಕೊಂಡು ಹೋಗಲಿ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ರು.