ಬೆಳಗಾವಿ : ಹಳ್ಳ ದಾಟಲು ಹೋಗಿ ಭೀಕರ ದುರ್ಘಟನೆ | ಇಬ್ಬರು ಬಾಲಕರ ದುರ್ಮರಣ

ಬೆಳಗಾವಿ : ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಭೀಕರ ಘಟನೆ ನಡೆದಿದ್ದು, ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಹಳ್ಳವನ್ನು ಎತ್ತಿನ ಗಾಡಿಯಲ್ಲಿ ದಾಟಲು ಯತ್ನಿಸಿದ ವೇಳೆ, ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಕ್ಕಳನ್ನು ದೀಪಕ್ ಸಂಜಯ ಕಾಂಬಳೆ (9) ಮತ್ತು ಗಣೇಶ ಸಂಜಯ ಕಾಂಬಳೆ (7) ಎಂದು ಗುರುತಿಸಲಾಗಿದ್ದು, ಇಬ್ಬರೂ ಸಹೋದರರು. ಜೊತೆಗೆ ಅವರ ಸಹೋದರನಾದ ವೇದಾಂತ ಕಾಂಬಳೆ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಮಕ್ಕಳ ತಂದೆ ಸಂಜಯ ಕಾಂಬಳೆ, ಸಂಬರಗಿ ಗ್ರಾಮದಿಂದ ನಾಗನೂರ ಪಿಎ ಗ್ರಾಮಕ್ಕೆ ಎತ್ತಿನ ಬಂಡಿಯಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಈ ದಾರಿಯಲ್ಲಿ ಇರುವ ಹಳ್ಳವೊಂದು ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದಿತ್ತು. ಹಳ್ಳದ ಕೆಳಭಾಗದಲ್ಲಿ ಮರಳು ತೆಗೆಯಲಾದ ಕಾರಣದಂತೆ ಆಳವಾದ ಗುಂಡಿಯು ಉಂಟಾಗಿತ್ತು. ಸದ್ಯಕ್ಕೆ ನೀರಿನಿಂದ ಆ ಗುಂಡಿಯು ಗೋಚರವಾಗದೆ, ಎತ್ತು ಆಯತಪ್ಪಿ ಬಿದ್ದು ಬಂಡಿಯಲ್ಲಿದ್ದ ಮೂವರು ಮಕ್ಕಳು ತೀವ್ರ ಪ್ರವಾಹದ ನೀರಿಗೆ ಎಸೆಯಲ್ಪಟ್ಟಿದ್ದಾರೆ. ತಂದೆ ತಮ್ಮ ಮಗನಾದ ವೇದಾಂತನನ್ನು ಪಾರುಮಾಡಿದರೂ, ಉಳಿದ ಇಬ್ಬರು ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ದುರ್ಘಟನೆಯಲ್ಲಿ ಬಂಡಿಗೆ ಜೋಡಿಸಲಾಗಿದ್ದ ಒಂದು ಎತ್ತು ಕೂಡ ಆಳವಾದ ನೀರಲ್ಲಿ ಮುಳುಗಿ ಸಾವನ್ನಪ್ಪಿದೆ. ಇದು ಈ ದುರಂತದ ತೀವ್ರತೆಯನ್ನು ಹೆಚ್ಚಿಸಿದ್ದು, ಸ್ಥಳೀಯರ ನಡುವೆ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಈ ವೇಳೆ ಹಳ್ಳದ ಪಕ್ಕದಲ್ಲಿದ್ದ ಗ್ರಾಮಸ್ಥರು ತಕ್ಷಣವೇ ನೆರವಿಗೆ ಧಾವಿಸಿ, ನೀರಿನಲ್ಲಿ ಮುಳುಗಿದ್ದ ಮಕ್ಕಳನ್ನು ಹೊರತೆಗೆಯಲು ಹರಸಾಹಸ ಪಡಿದರು. ಆದರೆ ದುರದೃಷ್ಟವಶಾತ್ ದೀಪಕ್ ಮತ್ತು ಗಣೇಶ್ ಮಕ್ಕಳನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಗಾಯಗೊಂಡಿರುವ ವೇದಾಂತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಈ ಘಟನೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

Author:

...
Keerthana J

Copy Editor

prajashakthi tv

share
No Reviews