ತುಮಕೂರು : ತುಮಕೂರು RTO ಕಚೇರಿಯಲ್ಲಿ ನಿಲ್ಲುತ್ತಿಲ್ಲ ಅಧಿಕಾರಿಗಳ ಕಳ್ಳಾಟ...!

ತುಮಕೂರು : ನಿಮ್ಮ ಪ್ರಜಾಶಕ್ತಿ ಮಾಧ್ಯಮ ತುಮಕೂರು ಆರ್ ಟಿಓ ಕಚೇರಿಯಲ್ಲಿ ನಡೆಯುತ್ತಿರುವ ಕಳ್ಳಾಟಗಾಳ ಬಗ್ಗೆ ನಿರಂತರವಾಗಿ ವರದಿಯನ್ನು ಬಿತ್ತರಿಸುತ್ತ ಬರ್ತಿದೆ. ಆರ್‌ಟಿಓ ಕಚೇರಿಯಲ್ಲಿ ದಲ್ಲಾಳಿಗಳ ದರ್ಬಾರ್‌, ಸಿಬ್ಬಂದಿಯ ಭ್ರಷ್ಟಾಚಾರ ಎಲ್ಲದರ ಬಗ್ಗೆಯೂ ಸಾಕ್ಷಿ ಸಮೇತ ವರದಿ ಮಾಡುವ ಕೆಲಸ ಮಾಡಿದೆ. ಆದರೆ ಏನೇ ಮಾಡಿದರೂ ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

ಆರ್‌ಟಿಓ ಅಧಿಕಾರಿಗಳು ಮೊಂಡು ಬಿದ್ದಿದ್ದಾರೆ. ಹೀಗಾಗಿ ದಿನೇದಿನೇ ಆರ್ ಟಿ ಓ ಕಚೇರಿಯಲ್ಲಿ ಅಧಿಕಾರಿಗಳ ಕಳ್ಳಾಟ ಹೆಚ್ಚಾಗ್ತಲೇ ಇದೆ. ಕಚೇರಿಗೆ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರಿಂದ ಹಣ ಕೀಳಲು ಮುಂದಾಗಿದ್ದಾರೆ. ಲೋಕಾ ಶಾಕ್‌ ಕೊಟ್ಟರೂ ಜಗ್ಗುತ್ತಿಲ್ಲ. ಸಾಲು ಸಾಲು ವರದಿ ಮಾಡಿದರೂ ಯಾರೂ ಸಹ ಕ್ಯಾರೇ ಮಾಡ್ತಿಲ್ಲ.

ಆರ್ ಟಿಓ ಕಚೇರಿ ಈಗಾಗಲೇ ದಲ್ಲಾಳಿಗಳ ಕಚೇರಿಯಾಗಿ ಮಾರ್ಪಟ್ಟಿದ್ದು, ಅಲ್ಲಿರುವ ಹಿರಿಯ ಅಧಿಕಾರಿಗಳು ಮಾತ್ರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರ ಜೊತೆಗೆ ಪ್ರತಿಯೊಂದು ಕೆಲಸಕ್ಕೂ ಸಾರ್ವಜನಿಕರಿಂದ ಲಂಚ ಪಡೆಯುವ ಕೆಲಸವಾಗ್ತಿದೆ. ಇಂದು ನಿಮ್ಮ ಪ್ರಜಾಶಕ್ತಿ ಟಿವಿ ನಡೆಸಿದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸಾರ್ವಜನಿಕರಿಂದ ಹಣ ತೆಗೆದುಕೊಳ್ಳುವ ದೃಶ್ಯ ಸೆರೆಯಾಗಿದ್ದು, ಆರ್‌ಟಿಓ ಕಚೇರಿಯಲ್ಲಿ ಲಂಚಬಾಕತನ ನಡೆಯುತ್ತಿರೋದಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ.

ಇಷ್ಟೆಲ್ಲಾ ನಡಿಯುತ್ತಿದ್ದರೂ ಕೂಡಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್ ಕಣ್ಣುಮುಚ್ಚಿ ಕುಳಿತಿರುವುದನ್ನು ನೋಡಿದರೆ ಅವರಿಗೂ ಇಲ್ಲಿ ನಡೆಯುವ ಅವ್ಯವಹಾರದಲ್ಲಿ ಪಾಲಿದೆಯೇ ಎನ್ನುವ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಇನ್ನಾದರೂ ಸಾರಿಗೆಯ ಇಲಾಖೆಯ ಹಿರಿಯ ಅಧಿಕಾರಿಗಳು ತುಮಕೂರಿನ ಆರ್‌ಟಿಓ ಕಚೇರಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಗಮನಹರಿಸಿ, ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ.

Author:

...
Sushmitha N

Copy Editor

prajashakthi tv

share
No Reviews