ಶಿರಾ : ತಂಬಾಕು ಇಂದು ಶೋಕಿಯಾಗಿದೆ | ನ್ಯಾ. ನರಸಿಂಹಮೂರ್ತಿ ಬೇಸರ

ಶಿರಾ : ಮಕ್ಕಳಲ್ಲಿ, ಯುವಜನತೆಯಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಆಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತೆ ಎಂದು ನ್ಯಾಯಾಧೀಶ ನರಸಿಂಹಮೂರ್ತಿ.ಎ ಶಿರಾದಲ್ಲಿ ಕರೆ ನೀಡಿದ್ರು.

ಇಂದು ವಿಶ್ವದೆಲ್ಲೆಡೆ ತಂಬಾಕು ನಿಷೇಧ ದಿನ ಆಚರಿಸಲಾಗುತ್ತಿದೆ. ಅದರಂತೆ ಶಿರಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆರ್.ಮುದ್ದುರಂಗೇ ಗೌಡ ಶಿಕ್ಷಣ ವಿದ್ಯಾಲಯ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯೋಗದೊಂದಿಗೆ ʼವಿಶ್ವ ತಂಬಾಕು ನಿಷೇಧ ದಿನವನ್ನು ಆಚರಿಸಲಾಯಿತು. ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶ ನರಸಿಂಹಮೂರ್ತಿ ಎ, ತಂಬಾಕು ಸೇವೆನೆಯಿಂದಾಗಿ ಆರೋಗ್ಯದ ಮೇಲೆ ಉಂಟಾ ಗುತ್ತಿರುವ ದುಷ್ಪರಿಣಾಮನ್ನು ಕುರಿತಾಗಿ ಮಕ್ಕಳು, ಯುವಜನತೆಯಲ್ಲಿ ಅರಿವು ಮೂಡಿಸಬೇಕು. ಬಹಳಷ್ಟುಮಂದಿ ಇಂದು ಸ್ಟೈಲ್, ಫ್ಯಾಶನ್‌ಗೆ  ಮನಸೋತು ದುಷ್ಟಟಗಳಿಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಲು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಎಂ.ರಂಗನಾಥ್‌, ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ,ನ ಶರ್ಮಿಳ ಇ.ಜೆ., ಸಹಾಯಕ ಸರ್ಕಾರಿ ಅಭಿಯೋಜಕ ಹೇಮಂತ್‌, ವಕೀಲ ಸಂಘದ ಅಧ್ಯಕ್ಷ ಹೆಚ್‌.ಗುರುಮೂರ್ತಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು , ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Author:

...
Keerthana J

Copy Editor

prajashakthi tv

share
No Reviews