ತುಮಕೂರು : KSRTC ಬಸ್ ಟೈರ್ ಬ್ಲಾಸ್ಟ್ | ತಪ್ಪಿದ ಭಾರೀ ಅನಾಹುತ

ತುಮಕೂರು : ಚಲಿಸುತ್ತಿದ್ದಾಗಲೇ ಏಕಾಏಕಿ ಕೆಎಸ್‌ಆರ್‌ಟಿಸಿ ಬಸ್‌ನ ಟೈರ್‌ ಬ್ಲಾಸ್ಟ್‌ ಆಗಿರುವ ಘಟನೆ ತುಮಕೂರು ಹೊರವಲಯದಲ್ಲಿರುವ ಊರುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ವಲ್ಪದರಲ್ಲಿಯೇ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳಿಗೆ ಇಡೀ ದೇಶದಲ್ಲಿಯೇ ಹೆಸರಿದೆ. ಕೆಎಸ್‌ಆರ್‌ಟಿಸಿ ಸಂಸ್ಥೆ ಇತ್ತೀಚೆಗಷ್ಟೇ ಹೊಸದಾಗಿ ಅಶ್ವಮೇಧ ಬಸ್‌ಗಳನ್ನ ಬಿಟ್ಟಿದ್ದು, ಸದ್ಯ ಇದೇ ಅಶ್ವಮೇಧ ಬಸ್‌ ನಲ್ಲಿ ಅವಘಡ ಸಂಭವಿಸಿದೆ. ಹರಿಹರದಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಅಶ್ವಮೇಧ ಬಸ್ ನ ಟೈರ್‌ ಏಕಾಏಕಿ ಬ್ಲಾಸ್ಟ್‌ ಆಗಿದ್ದು, ಟೈರ್‌ ಬ್ಲಾಸ್ಟ್‌ ಆದ ತಕ್ಷಣ ಚಾಲಕ ಚಂದ್ರಪ್ಪ ಬಸ್ಸನ್ನು ಸೈಡಿಗೆ ಹಾಕಿ ಪ್ರಯಾಣಿಕರನ್ನು ಸೇವ್‌ ಮಾಡಿದ್ದಾರೆ. ಚಾಲಕ ಚಂದ್ರಪ್ಪ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 50ಕ್ಕೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews