TUMKUR : ಅಪರಿಚಿತ ವಾಹನ ಹರಿದು ಯುವಕನ ಕಾಲು ಅಪ್ಪಚ್ಚಿಯಾಗಿದ್ದು, ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬರದೆ ನಡುರಸ್ತೆಯಲ್ಲಿ ಕಾಲು ಛಿದ್ರ ಛಿದ್ರವಾಗಿ ರಕ್ತದ ಮಡುವಿನಲ್ಲಿ ಯುವಕ ನರಳಾಡಿದ್ದಾನೆ. ತುಮಕೂರಿನ ನೆಲಹಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇನ್ನು ಅಪಘಾತಕ್ಕೊಳಗಾದ ವ್ಯಕ್ತಿಯನ್ನು ತೋವಿನಕೆರೆಯ ನಿವಾಸಿ ಪದ್ಮರಾಜು ಎನ್ನಲಾಗಿದ್ದು, ಯುವಕ ಪದ್ಮರಾಜ್ ಅಡಿಕೆ ಮಂಡಿಯನ್ನು ನಡೆಸುತ್ತಿದ್ದ. ಕೆಲಸ ನಿಮಿತ್ತ ಶಿರಾಗೆ ಹೋಗಿ ವಾಪಾಸ್ ಗ್ರಾಮಕ್ಕೆ ಹಿಂದಿರುಗುವಾಗ ಘಟನೆ ನಡೆದಿದೆ. ಇತ್ತ ಅಪಘಾತವಾಗಿ ಗಂಟೆ ಕಳೆದರು ಕೂಡ ಆಂಬುಲೆನ್ಸ್ ಸಿಗದೇ ಸಾವು ಬದುಕಿನ ನಡುವೆ ಯುವ ಹೋರಾಟ ನಡೆಸಿದ್ದಾನೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಮಾಡಿದ ವಾಹನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.