TUMAKURU : ತುಮಕೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ವಿದ್ಯಾವಾಹಿನಿ ಕಾಲೇಜು ದ್ವೀತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಸಾಧನೆ ಮಾಡಿತ್ತು. ಇದೀಗ ವಿದ್ಯಾವಾಹಿನಿ ಸಂಸ್ಥೆ ಮತ್ತೊಂದು ಮಹತ್ತರ ಹೆಜ್ಜೆಯೊಂದನ್ನು ಇಟ್ಟಿದೆ. ಹೌದು, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಸಮೂಹದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಟೆಕ್ನಾಲಜಿ ವತಿಯಿಂದ ಎಐ ಯುಗದಲ್ಲಿ ಎಂಬಿಎ ಎಂಬ ವಿಷಯದ ಬಗ್ಗೆ ಫ್ಯಾನಲ್ ಚರ್ಚೆಯನ್ನು ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದೆ.
ತುಮಕೂರು ನಗರದ ಟೌನ್ಹಾಲ್ ಸರ್ಕಲ್ ಬಳಿ ಇರೋ ಸೆಂಟ್ರಲ್ ಲೈಬ್ರರಿಯ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಎಂಬಿಎ ಆಕಾಂಕ್ಷಿಗಳಿಗೆ ಉದ್ಯಮದ ತಜ್ಞರೊಂದಿಗೆ ಸಂವಾದ ನಡೆಸಲು ಮತ್ತು ಎಐ ಯುಗದಲ್ಲಿ ಮ್ಯಾನೇಜ್ ಮೆಂಟ್ ಶಿಕ್ಷಣದ ಪಾತ್ರವನ್ನು ತಿಳಿಸಲಾಯ್ತು. ಇನ್ನು ತುಮಮಕೂರಿನ ಶಾರದಾ ದೇವಿ ನಗರದಲ್ಲಿರುವ ವಿನ್ಟೆಕ್, ಶೈಕ್ಷಣಿಕ ಗುರಿಗಳನ್ನು ಮತ್ತು ಉದ್ಯಮದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಇಟ್ಟುಕೊಂಡು ಈ ಸಂವಾದವನ್ನು ಆಯೋಜಿಸಲಾಗಿತ್ತು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾವಾಹಿನಿ ಶಿಕ್ಷಣ ಸಮೂಹದ ಕಾರ್ಯದರ್ಶಿ ಪ್ರದೀಪ್ ಕುಮಾರ್, ಎಂಬಿಎ ವಿದ್ಯಾರ್ಥಿಗಳಿಗಾಗಿ ಮೆಂಟರ್ಸ್ ಪ್ರೋಗ್ರಾಮ್ ಆಯೋಜನೆ ಮಾಡಲಾಗಿದ್ದು, ಸರ್ಕಾರದಿಂದ ಮಾನ್ಯತೆ ಪಡೆದು ಹೊಸ ಎಂಬಿಎ ಕಾಲೇಜನ್ನು ಆರಂಭಿಸಿದ್ದೇವೆ. N2, N3 ಸರ್ಟಿಫಿಕೇಷನ್ಸ್ ನೀಡುವ ಪ್ರಥಮ, ಏಕೈಕ ಕಾಲೇಜು ಅಂದರೆ ವಿದ್ಯಾವಾಹಿನಿ ಆಗಿದೆ. ಇಂದಿನ ದಿನಮಾನಗಳಲ್ಲಿ ಉದ್ಯೋಗ ಸಿಗುವುದು ಬಹಳಷ್ಟು ಕಷ್ಟ, ಇದರಿಂದ ಉದ್ಯೋಗ ಅವಕಾಶಗಳು ಮತ್ತಷ್ಟು ತೆರೆದುಕೊಳ್ಳುತ್ತವೆ. ಜಪಾನಿನ ಕಂಪನಿಗಳ ಉದ್ಯೋಗಗಳನ್ನು ಬೇರೆಯವರು ತೆಗೆದುಕೊಳ್ಳುವುದಕ್ಕಿಂತ, ಆ ಕೆಲಸವನ್ನು ತುಮಕೂರಿನವರು ತೆಗೆದುಕೊಳ್ಳಬೇಕು ಎಂದು ಪ್ರದೀಪ್ ಕುಮಾರ್ ಆಶಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಮೂಹದ ಕಾರ್ಯದರ್ಶಿ ಪ್ರದೀಪ್ ಕುಮಾರ್, ಬೆಂಗಳೂರಿನ ಬ್ರಿಸಾ ಟೆಕ್ನಾಲಜೀಸ್ ಸಂಸ್ಥೆಯ ಸಂಸ್ಥಾಪಕ ಸುಭೋಧ್ ಪಾಟೀಲ್, ಎನ್- ಸಿಂಥೆಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ವಿನಯ್ ಪ್ರಶಾಂತ್, ಕಾಮನ್ ವೆಲ್ತ್ ಬ್ಯಾಂಜ್ ಆಫ್ ಆಸ್ಟ್ರೇಲಿಯಾದ ನಿರ್ದೇಶಕ ಅಮನ್ ಸಕ್ಸೇನಾ ಹಾಗೂ ನೂರಾರು ಮಂದಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾಗಿದ್ದು, ಎಐ ಯುಗದಲ್ಲಿ ಎಂಬಿಎ ವಿಷಯದ ಬಗ್ಗೆ ಚರ್ಚೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.