Tumakuru : ಜಗದ್ಗುರು ಬಸವೇಶ್ವರರ ಜಯಂತೋತ್ಸವದ ಪ್ರಯುಕ್ತ ಪತ್ರಿಕಾಗೋಷ್ಠಿ

TUMAKURU : ಶ್ರೀ ಕ್ಷೇತ್ರ ಸಿದ್ಧರಬೆಟ್ಟ ಬಾಳೆಹೊನ್ನೂರು ಶಾಖಾ ಮಠದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ 19ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ಜಗದ್ಗುರು ರೇಣುಕಾಚಾರ್ಯ ಮತ್ತು ಜಗದ್ಗುರು ಬಸವೇಶ್ವರರ ಜಯಂತ್ಯೋತ್ಸವದ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಲಾಯ್ತು.

ಜೂನ್ 8 ರಂದು ವಿಭಿನ್ನ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾಮೂಹಿಕ ವಿವಾಹ ಮಹೋತ್ಸವ, ಜನಜಾಗೃತಿ ಸಮಾರಂಭ, ಉಚಿತ ಸಾಮೂಹಿಕ ದೀಕ್ಷೆ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಮಹಾ ರುದ್ರಾಕ್ಷಿ ಕಾ ಮತ್ತು ಬಿಲ್ವಾರ್ಚನೆ ಕಾರ್ಯಕ್ರಮಗಳ ಅಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸ್ವಾನಿಧ್ಯವನ್ನು ರಂಭಾಪುರಿ ಮಠದ ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕೇಂದ್ರ ಸಚಿವ ಸೋಮಣ್ಣ ಉದ್ಘಾಟಿಸಲಿದ್ದು, ಕರ್ನಾಟಕ ಗೃಹಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಇನ್ನು ನೂತನ ದಾಸೋಹ ಭವನ ಉದ್ಘಾಟನೆಯನ್ನು ಸಚಿವ ರಾಜಣ್ಣ ಮಾಡಲಿದ್ದು, ಆಂಧ್ರ ಪ್ರದೇಶದ ಮಾಜಿ ಸಚಿವ ರಘುವೀರ ರೆಡ್ಡಿ ವಸತಿಗೃಹ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಗಳು ಸಿದ್ಧರಬೆಟ್ಟದಲ್ಲಿ ಬಾಳೆಹೊನ್ನೂರು ಶಾಖಾಮಠದ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಪರಂಪರೆಯ ಆಚರಣೆ ಮತ್ತು ಸಮುದಾಯದ ಕಲ್ಯಾಣದ ಉದ್ದೇಶವನ್ನು ಬಿಂಬಿಸುತ್ತವೆ.

Author:

...
Sushmitha N

Copy Editor

prajashakthi tv

share
No Reviews