TUMAKURU NEWS |ಗಡಿಭಾಗದಲ್ಲಿ ಆರೋಗ್ಯ ಸೇವೆ ಮರೀಚಿಕೆ ರಾಮಕೃಷ್ಣ ಆಶ್ರಮದ ಜಪಾನಂದ್ ಜಿ ಬೇಸರ

ಗಡಿಭಾಗದಲ್ಲಿ ಅರೋಗ್ಯ ಸಮಸ್ಯೆ ಹೆಚ್ಚು ಕಾಡುತಿದೆ. ಸರಕಾರ ಆಸ್ಪತ್ರೆಗಳನ್ನು ತೆರೆಯುವ ಬದಲು ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಉನ್ನತಿಕರಿಸಿ ಸೂಕ್ತ ಆರೋಗ್ಯ ಸೇವೆಯನ್ನು ಒದಗಿಸಿದ್ರೆ ಬಡ ಜನರಿಗೆ ಅನುಕೂಲವಾಗುತ್ತದೆ ಎಂದು ಪಾವಗಡ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಜಪಾನಂದ್ ಮಹಾರಾಜ್ ಮಧುಗಿರಿಯಲ್ಲಿ ತಿಳಿಸಿದರು.

ತಾಲ್ಲೂಕಿನ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇನೋಸಿಸ್ ಫೌಂಡೇಶ್ ಹಾಗೂ ಶಾರದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಗಡಿಭಾಗದ ಅರೋಗ್ಯ ಕೇಂದ್ರಗಳನ್ನು ಮೇರ್ಲ್ದಜೆಗೇರಿಸಿದರೆ ಬಹುತೇಕ ಜನರಿಗೆ ಇದರ ಪ್ರಯೋಜನವಾಗಲಿದೆ. ನಮ್ಮ ಆಶ್ರಮದಲ್ಲಿ ಕಣ್ಣಿನ ತಪಾಸಣೆಗೆ ಅವಶ್ಯಕವಾದ ಅತ್ಯಾಧುನಿಕ ಯಂತ್ರೋಪಕರಣಗಳಿದ್ದು, ಇದರಿಂದ 55 ಸಾವಿರಕ್ಕೂ ಅಧಿಕ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ದರ್ಶನ್ ಮಾರೇಗೌಡ, ಇನ್ಫೋಸಿಸ್ ಪ್ರೋಗ್ರಾಮ್ ಮ್ಯಾನೇಜರ್‌ ಮಹೇಶ್‌, ಡಾ.ಸ್ವಾತಿ ಸೇರಿ ಇನ್ಫೋಸೀಸ್‌ನ ಸ್ವಯಂ ಸೇವಕರು ಹಾಜರಿದ್ರು.

Author:

...
N Meghana Prashanth

Anchor

prajashakthi tv

share
No Reviews