MADHUGIRI : ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಅನ್ನು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಮಧುಗಿರಿಯಲ್ಲಿ ಲೋಕಾರ್ಪಣೆಗೊಳಿಸಿದರು.
ಇನ್ನು ಸಂಚಾರಿ ಆರೋಗ್ಯ ಕ್ಲಿನಿಕ್ ಲೋಕಾರ್ಪಣೆಗೊಳಿಸಿ, ನಂತರ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಸ್ವತಃ ಅವರೇ ಒಳಹೋಗಿ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ವಿವಾಹವಾದ ಮೂರು ಜನ ನೋಂದಾಯಿತ ಫಲಾನುಭವಿಗಳಿಗೆ 60 ಸಾವಿರ ರೂಗಳಂತೆ ಒಟ್ಟು 1 ಲಕ್ಷದ 80 ಸಾವಿರ ರೂಗಳು, ಇಬ್ಬರ ಅಂತ್ಯ ಸಂಸ್ಕಾರದ ವೆಚ್ಚ 1 ಲಕ್ಷ 50 ಸಾವಿರ ರೂಗಳು ಹಾಗೂ ಒಬ್ಬರಿಗೆ 3 ಸಾವಿರ ರೂ ಪಿಂಚಣಿ ಮೊತ್ತದ ಚೆಕ್ ಮತ್ತು 12 ಜನ ಕಟ್ಟಡ ಕಾರ್ಮಿಕರಿಗೆ ಕಿಟ್ಗಳನ್ನು ವಿತರಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರೀನ್ ತಾಜ್, ಪುರಸಭಾಧ್ಯಕ್ಷ ಲಾಲಪೇಟೆ ಮಂಜುನಾಥ್, ಕಾರ್ಮಿಕ ಅಧಿಕಾರಿ ಫೈರೋಜ್ ಪಾಷ, ಕಾರ್ಮಿಕ ನೀರೀಕ್ಷಕ ಶ್ರೀಕಾಂತ್, ಹರೀಶ್, ಬಾಲ ಕಾರ್ಮಿಕ ಯೋಜನಾಧಿಕಾರಿ ರವಿಕುಮಾರ್, ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಪಾಂಡುರಂಗಯ್ಯ, ಮಹಿಳಾ ಅಧ್ಯ-ಕ್ಷೆ ಪಾರ್ವತಿ ಮಂಜುನಾಥ್ ಶರ್ಮ, ಮತ್ತಿತ್ತರರು ಹಾಜರಿದ್ದರು.