ತಿಪಟೂರು: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ, ತಿಪಟೂರಿನಲ್ಲಿ ಇಂದು ಬೃಹತ್ ತಿರಂಗ ಯಾತ್ರೆ ನಡೆಸಲಾಯಿತು. ಈ ಯಾತ್ರೆಯಲ್ಲಿ ತ್ರಿವರ್ಣ ಧ್ವಜವನ್ನು ಶಾಲಾ ಮಕ್ಕಳು ಹಿಡಿದು, ಕೆಂಪಮ್ಮ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಕೊಡಿ ಸರ್ಕಲ್, ದೊಡ್ಡಪೇಟೆ ಬೀದಿ, ನಗರಸಭೆ ಮುಖ್ಯ ರಸ್ತೆಗಳ ಮೂಲಕ ಕಲ್ಪತರ ಕ್ರೀಡಾಂಗಣದವರೆಗೆ ಸಾಗಿತು.
ಕಲ್ಪತರು ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆಯೊಂದಿಗೆ ಬಲೂನುಗಳನ್ನು ಆಕಾಶಕ್ಕೆ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಉದ್ಘಾಟನೆ ನೀಡಲಾಯಿತು. ಯಾತ್ರೆಯಲ್ಲಿ ಹಲವರು ಉತ್ಸಾಹದಿಂದ ಭಾಗವಹಿಸಿ ದೇಶಪ್ರೇಮವನ್ನು ತೋರಿಸಿದರು. ಇನ್ನು ಕಾರ್ಯಕ್ರಮದಲ್ಲಿ ಹಾಲಿ ಹಾಗೂ ನಿವೃತ್ತ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ಮಾಜಿ ಸೈನಿಕರಾದ ಚಂದ್ರಶೇಖರ್ ಅವರು ಮಾತನಾಡಿ, "ಭಾರತದ ಪ್ರತಿಯೊಬ್ಬ ನಾಗರಿಕನು ಜಾತಿ, ಧರ್ಮ, ವರ್ಗ, ಭಾಷೆಯ ಭೇದವಿಲ್ಲದೆ ರಾಷ್ಟ್ರದ ರಕ್ಷಣೆಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು" ಎಂದು ತಿಳಿಸಿದರು.
ಈ ವೇಳೆ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್, ಖಾತ್ಯ ವೈದ್ಯ ಮತ್ತು ಸಮಾಜ ಸೇವಕರಾದ ಡಾ. ಶ್ರೀಧರ್, ಜೆಡಿಎಸ್ ಮುಖಂಡರಾದ ಕೆ.ಟಿ. ಶಾಂತಕುಮಾರ್, ಜಕ್ನಳ್ಳಿ ಲಿಂಗರಾಜ್, ಸಮಾಜ ಸೇವಕರಾದ ಲೋಕೇಶ್ವರ್, ನಿಖಿಲ್ ರಾಜಣ್ಣ (ಕಾಂಗ್ರೆಸ್ ಯುವ ಮುಖಂಡ) ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಿಪಟೂರಿನ ಎಲ್ಲ ಶಾಲೆಗಳ ಮಕ್ಕಳು ಹಾಗೂ ದೇಶಾಭಿಮಾನಿಗಳು, ಹಿಂದೂ ಕಾರ್ಯಕರ್ತರು ಈ ಮೆರವಣಿಗೆಗೆ ಸಾಕ್ಷಿಯಾದರು.