TEAM INDIA: ಇಂಗ್ಲೆಂಡ್ ಪ್ರವಾಸದ ಭಾಗವಾಗಿ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ಟೀಂ ಇಂಡಿಯಾ (Team India) ಆಟಗಾರರು, ಪಂದ್ಯಾರಂಭಕ್ಕೂ ಮುನ್ನ ಕಪ್ಪು ಪಟ್ಟಿ ಧರಿಸಿ ಮೌನಾಚರಣೆ ಮಾಡಿದರು.
ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿಯಾಗಿ ಟೀಮ್ ಇಂಡಿಯಾದ ಶ್ರದ್ಧೆ ಮತ್ತು ಭಾವುಕತೆಗೆ ಸಾಕ್ಷಿಯಾದ ಸಂದರ್ಭವಾಗಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದ ಸಮೀಪದಲ್ಲಿ ನಡೆದ ಭೀಕರ ದುರಂತದಲ್ಲಿ ಹಲವು ಅಮೂಲ್ಯ ಜೀವಗಳು ನಷ್ಟವಾದ ಹಿನ್ನೆಲೆಯಲ್ಲಿ, ದೇಶಾದ್ಯಂತ ಸಂತಾಪದ ಛಾಯೆ ಮೂಡಿದೆ. ಈ ದುರಂತದ ಕುರಿತು ಜಗತ್ತಿನಾದ್ಯಾಂತ ಭಾರತೀಯರು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಪಂದ್ಯದ ಪೂರ್ವಭಾಗದಲ್ಲಿ ಎಲ್ಲ ಆಟಗಾರರು ಹಾಗೂ ಸಿಬ್ಬಂದಿ ಕಪ್ಪು ಪಟ್ಟಿಯನ್ನು ಕೈಗಳಿಗೆ ಧರಿಸಿದರು ಒಂದು ನಿಮಿಷ ಮೌನಾಚರಣೆ ಮೂಲಕ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ಕ್ರಿಕೆಟ್ ಕೇವಲ ಆಟವಲ್ಲ, ಸಮಾಜದ ನೋವಿಗೂ ಸ್ಪಂದಿಸುವ ವೇದಿಕೆಯೂ ಹೌದು ಎಂಬ ಸಂದೇಶವನ್ನು ಟೀಂ ಇಂಡಿಯಾ ಈ ಮೂಲಕ ನೀಡಿದೆ.