Sira : ಸಾವಿಗಾಗಿ ಬಾಯ್ತೆರೆದು ಕೂತಿರುವ ವಿದ್ಯುತ್ ಕಂಬಗಳು...!

SIRA : ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಮಳೆ ಹಿನ್ನಲೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮತ್ತು ರೆಡ್‌ ಅಲರ್ಟ್‌ ಘೋಷಣೆ ಕೂಡ ಮಾಡಿದ್ದಾರೆ. ಇಂತಹ ಸಮಯದಲ್ಲಿ ವಿದ್ಯುತ್‌ ಅವಘಡಗಳು ಸಂಭವಿಸುವುದು ಹೆಚ್ಚು. ಈ ಕಾರಣಕ್ಕೆ ಆಯಾ ಜಿಲ್ಲಾಡಳಿತ ಜವಾಬ್ದಾರಿ ಹೊತ್ತು ಇಲಾಖೆಗಳಿಗೆ ಜಾಗೃತಿ ವಹಿಸುವಂತೆ ಸೂಚನೆಯನ್ನು ನೀಡುತ್ತೆ. ಆದರೂ ಕೂಡ ಕೆಲವು ಕಡೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ. ಈ ಕಾರಣಕ್ಕೆ ಹಲವು ಸಾವು-ನೋವು ಸಂಭವಿಸುತ್ತದೆ. ಇತ್ತ ಶಿರಾ ತಾಲೂಕಿನಲ್ಲಿ ಲೈಟ್‌ ಕಂಬಕ್ಕೆ ಬಳ್ಳಿಗಳು ಹಬ್ಬಿದ್ದು, ಸಾವಿಗೆ ಬಾಯ್ತೆರೆದು ಕೂತಿದೆ. ವಿದ್ಯುತ್‌ ಕಂಬದ ಕೆಳಕಡೆ ಕೂತು ಜನರು ಜೀವಭಯದಲ್ಲಿ ವ್ಯಾಪಾರ ಮಾಡುವಂತಾಗಿದೆ.

ಶಿರಾ ​ನಗರದ ಸಾರ್ವಜನಿಕ ಆರೋಗ್ಯ ಕೇಂದ್ರ ಮತ್ತು ಪಶು ಆಸ್ಪತ್ರೆ ಮದ್ಯ ಸಪ್ತಗಿರಿ ಬಡಾವಣೆಗೆ ಹೋಗುವ ದಾರಿಯಲ್ಲಿ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡಿವೆ. ಹಲವು ತಿಂಗಳುಗಳಿಂದಲೂ ಈ ರಸ್ತೆಯಲ್ಲಿ ಇರುವ ಲೈಟ್‌ ಕಂಬಕ್ಕೆ ಎರಡು ಬದಿಯಿಂದಲೂ ಬಳ್ಳಿಗಳು ಹಬ್ಬಿವೆ. ಅಲ್ಲಿ ಬೆಳೆದಿರುವ ಮರಗಳಿಂದ ಬಳ್ಳಿಗಳು ಹಬ್ಬಿಕೊಂಡು ರಸ್ತೆಗೆ ಭಾಗಿವೆ. ಅದು ಹೇಳಿ ಕೇಳಿ ಮಾರುಕಟ್ಟೆ ಇಲ್ಲಿ ಹೂವು ಹಣ್ಣ, ತರಕಾರಿ, ಇತರೆ ವಸ್ತುಗಳು ಖರೀದಿಸಲು ಜನರು ಬರುತ್ತಾರೆ. ಇಲ್ಲಿರುವ ವಿದ್ಯುತ್‌ ಕಂಬಗಳಿಂದ ಯಾವಾಗ ಬೇಕಾದರೂ ಅವಘಡ ಸಂಭವಿಸಬಹುದು.

ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿಯೇ ಕೂತು ವ್ಯಾಪಾರ ಮಾಡುವ ಜನರು ಹಾಗೂ ರಸ್ತೆಯಲ್ಲಿ ಸಂಚರಿಸುವ ಮಹಿಳೆಯರು,ಮಕ್ಕಳು ಒಂದು ವೇಳೆ ಯಾಮಾರಿ ಕಂಬ ಮುಟ್ಟಿದರೆ, ಇಲ್ಲವೆ ಶಾರ್ಟ್‌ ಸರ್ಕ್ಯೂಟ್‌ ಆಗಿ ವಿದ್ಯುತ್‌ ಪ್ರವಹಿಸಿ ಸಾವು ಸಂಭವಿಸಬಹುದು. ಇತ್ತ ನಗರದ ಬಹುತೇಕ ಜಾಗಗಳಲ್ಲಿ ಇದೇ ಸಮಸ್ಯೆ ಇದ್ದು, ನಗರಾದ್ಯಂತ ಬಹುತೇಕ ಕಡೆಗಳಲ್ಲಿ ಎಲ್ಲೆಂದರಲ್ಲಿ ವಿದ್ಯುತ್‌ ಕಂಬಳಿಗೆ ಬಳ್ಳಿ ಹಬ್ಬಿ ಸಾವಿನ ಜಾಗಗಳಾಗುತ್ತಿವೆ. ರಸ್ತೆಗೆ ಭಾಗಿರುವ ಮರದ ಕೊಂಬೆಗಳನ್ನು ವಿದ್ಯುತ್‌ ಇಲಾಖೆಯ ಅಧಿಕಾರಿಗಳು ಕಡಿದು ಹಾಕುವ ಕೆಲಸ ಕೆಲವು ಕಡೆ ಮಾಡ್ತಿದ್ದಾರೆ. ಆದ್ರೆ ಮರದಿಂದ ವಿದ್ಯುತ್‌ ಕಂಬಗಳಿಗೆ ಹಬ್ಬಿರುವ ಬಳ್ಳಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಬೇಕು ಅಂತ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಅದೇನೇ ಇರಲಿ ಮಳೆಗಾದಲ್ಲಿ ಇಂತಹ ಪರಿಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್‌ಗಳು, ವಿದ್ಯುತ್‌ ಕಂಬಗಳಿಗೆ ಹಬ್ಬಿರುವ ಬಳ್ಳಿಗಳನ್ನು ತೆರವುಗೊಳಿಸಬೇಕಾಗಿದೆ. ಇಲ್ಲವಾದಲ್ಲಿ ಶಿರಾದಲ್ಲಿ ವಿದ್ಯುತ್‌ ಸ್ಪರ್ಷದಿಂದ ಸಂಭವಿಸುವ ಸಾವುಗಳಿಗೆ ನೇರವಾಗಿ ಬೆಸ್ಕಾಂ ಮತ್ತು ಕೆಇಬಿ ಅಧಿಕಾರಿಗಳೇ ಕಾರಣರಾಗುತ್ತಾರೆ.

Author:

...
Sushmitha N

Copy Editor

prajashakthi tv

share
No Reviews