UDUPI : ಕಾಮಿಡಿ ಕಿಲಾಡಿಗಳು ಸೀಸನ್ 3 ವಿಜೇತೆ [COMEDY KILADIGALU] ಹಾಗೂ ನಟ RAKESH POOJARY ಅಕಾಲಿಕ ನಿಧನವು ಕನ್ನಡ ಚಿತ್ರರಂಗವನ್ನು ಶೋಕದಲ್ಲಿ ಮುಳುಗಿಸಿದೆ. ಮೇ 11ರಂದು ಸ್ನೇಹಿತನ ಮದುವೆಯ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ರಾಕೇಶ್ ಅವರು, ದಿಢೀರ್ BP LOW ಆಗಿ ಕುಸಿದು ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ [HEART ATTACK] ನಿಧನರಾಗಿದ್ದರು.
KANTARA CHAPTER 1 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ, ಶೂಟಿಂಗ್ ಕೆಲಸವನ್ನ ಪೂರ್ಣಗೊಳಿಸಿದ್ದರು. ಆದರೆ ಅಂತ್ಯಕ್ರಿಯೆಗೂ, ಅಂತ್ಯಸಂಸ್ಕಾರಕ್ಕೂ ನಟ RISHAB SHETTY ಗೈರಾಗಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ನಿಧನದ 21 ದಿನಗಳ ಬಳಿಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಜೊತೆಗೆ ರಾಕೇಶ್ ಪೂಜಾರಿ ಅವರ ಉಡುಪಿ [UDUPI] ಹೂಡೆಯಲ್ಲಿರುವ ರಾಕೇಶ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದಾರೆ. ರಾಕೇಶ್ ತಾಯಿ ಮತ್ತು ತಂಗಿಯೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದ್ದಾರೆ.