SIRA : ಖಾಲಿ ಕುರ್ಚಿಗಳ ನಡುವೆ ಕಾರ್ಯಕ್ರಮಕ್ಕೆ ಉದ್ಘಾಟನೆ ಭಾಗ್ಯ | ಸಾರ್ವಜನಿಕರಿಂದ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ

SIRA : ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಬೇಕಿದ್ದ ಶಿರಾದ ಕಾರ್ಯಕ್ರಮ ಜನಗಳಿಲ್ಲದೆ, ಖಾಲಿ ಕುರ್ಚಿಗಳ ನಡುವೆಯೇ ಬಣಗುಟ್ಟಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡುತ್ತಿದ್ದ ಕಾರ್ಯಕ್ರಮಕ್ಕೆ ಜನರೇ ಬಂದಿರಲಿಲ್ಲ. ಪ್ರಚಾರ ಕೊರತೆಯಿಂದಾಗಿ ಬುಕ್ಕಾಪಟ್ಟಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಅಕ್ಷರಶಃ ನೀರಸವಾಗಿತ್ತು. ರಸ್ತೆಯುದ್ದಕ್ಕೂ ಕೇವಲ ಅಧಿಕಾರಿಗಳ ವಾಹನಗಳು ಮಾತ್ರ ಇದ್ದವು ಬಿಟ್ಟರೆ, ಕಾರ್ಯಕ್ರಮದತ್ತ ಅದ್ಯಾಕೋ ಜನರು ಮನಸ್ಸೆ ಮಾಡಿರಲಿಲ್ಲ. ಈ ಕಾರಣಕ್ಕೆ ಕಾರ್ಯಕ್ರಮದ ಕುರಿತಾಗಿ ಶಿರಾದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚರ್ಚೆಗೆ ಗ್ರಾಸವಾಗ್ತಿದೆ.

ತುಮಕೂರು ಜಿಲ್ಲಾ ಸಹಕಾರ ಉತ್ಪಾದಕರ ಸಂಘಗಳ ಒಕ್ಕೂಟ, ಬುಕ್ಕಾಪಟ್ಟಣ ಮತ್ತು ಶಿರಾ ತಾಲೂಕಿನ ಹಾಲು ಉತ್ಪಾದಕರ ಸಂಘಗಳು, ತುಮುಲ್ ಟ್ರಸ್ಟ್, ಮಲ್ಲಸಂದ್ರ ವತಿಯಿಂದ  ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ, ಒಂದು ಲಕ್ಷ ಲೀಟರ್ ಹಾಲು ಶೇಖರಣಾ ಸಂಕಲ್ಪ ದಿನ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇತ್ತ ವೇದಿಕೆ ಎದುರು ಜನರಿಲ್ಲದೆ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದವು. ಖಾಲಿ ಕುರ್ಚಿಗಳ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಗಣ್ಯರು ಹಾಗೂ ಸಾರ್ವಜನಿಕರಿಗೆ ಹಾಕಿದ್ದ ಬಹುತೇಕ ಕುರ್ಚಿಗಳೆಲ್ಲ ಖಾಲಿ ಖಾಲಿ ಇದ್ದವು. ವೇದಿಕೆ ಬಳಿಯೂ ಜನರಿರಲಿಲ್ಲ. ಇತ್ತ ಜನರಿಗಿಂತ ಮುಖಂಡರು, ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. 

ಇದರ ನಡುವೆಯು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು, ಉಚಿತ ಆರೋಗ್ಯ ತಪಾಸಣಾ ಶಿಬಿರ, 2 ಕೋಟಿ ವೆಚ್ಚಗಳಲ್ಲಿ 110 ಜಾಬ್ ಕಟ್ಟರ್, ವಿವಿಧ ರೀತಿಯ ಮಿಷನ್ ಸಲಕರಣೆ, ಹಾಲು ಉತ್ಪಾದಕರ ನೂರಾರು ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ ಬಾಬು, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ, ಹಾಲು ಒಕ್ಕೂಟದ ನಿರ್ದೇಶಕರುಗಳಾದ ಕೆ.ಪಿ. ಭಾರತಿದೇವಿ, ಡಿ. ಕೃಷ್ಣಕುಮಾರ್, ಎಂ. ಕೆ. ಪ್ರಕಾಶ್, ಚಂದ್ರಶೇಖರ ರೆಡ್ಡಿ, ಬಿ.ಎನ್ ಶಿವಪ್ರಕಾಶ್,  ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ. ಶ್ರೀನಿವಾಸನ್, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಮತ್ತಿತರರು ಹಾಜರಿದ್ದರು. 

Author:

...
Sushmitha N

Copy Editor

prajashakthi tv

share
No Reviews