MOVIE : ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್‌ ಅಯ್ಯರ್‌ ಅರ್ಹರು ಎಂದ ರಾಜಮೌಳಿ

MOVIE NEWS : IPL 2025ರ ಫೈನಲ್‌ಗೆ PUNJAB KINGS ತಂಡ ಪ್ರವೇಶಿಸಿದ್ದು, ಈ ತಂಡದ ಗೆಲುವು ಹಿಂದೆ SHREYAS IYYER ಅವರ ಆಧಾರಭೂತ ಪಾತ್ರದ ಕುರಿತು ಚರ್ಚೆ ಜೋರಾಗಿದೆ. ಮುಂಬೈ ವಿರುದ್ಧದ ರೋಚಕ ಗೆಲುವಿನ ಬಳಿಕ ಪಂಜಾಬ್ 11 ವರ್ಷಗಳ ಬಳಿಕ ಫೈನಲ್ ತಲುಪಿದ್ದು, ಭಾರತ ಹೆಮ್ಮೆಪಡುವ ಯುವ ನಾಯಕನೊಬ್ಬನ ದಾರಿ ಬೆಳಗುತ್ತಿದೆ.

ಈ ಯಶಸ್ಸಿನ ಹಿನ್ನೆಲೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್. ರಾಜಮೌಳಿ [RAJA MOULI] ಟ್ವೀಟ್ ಮೂಲಕ ಶ್ರೇಯಸ್ ಅಯ್ಯರ್‌ನ್ನು ಹೊಗಳಿದ್ದಾರೆ. "ಈ ವರ್ಷದ ಐಪಿಎಲ್ ಟ್ರೋಫಿಗೆ ಶ್ರೇಯಸ್ ಅರ್ಹರು. ಬುಮ್ರಾ ಹಾಗೂ ಬೌಲ್ಟ್ ಅವರ ಯಾರ್ಕರ್‌ಗಳನ್ನು ಥರ್ಡ್ ಮ್ಯಾನ್ ಬೌಂಡರಿಗಟ್ಟುವ ಶ್ರೇಯಸ್‌ ಅವರ ಆಟ ಅದ್ಭುತ," ಎಂದು ಅವರು ಬರೆದುಕೊಂಡಿದ್ದಾರೆ.

ರಾಜಮೌಳಿ ತಮ್ಮ ಮೆಸೇಜ್‌ನಲ್ಲಿ ಶ್ರೇಯಸ್‌ ಅವರ ಹಿಂದಿಗಿನ ಪ್ರಯಾಣವನ್ನು ಸಹ ನೆನಪಿಸಿದ್ದು, "ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನ ಫೈನಲ್ಗೆ ಕರೆದೊಯ್ದರು, ನಂತರ ತಂಡವು ಅವರನ್ನು ಕೈಬಿಟ್ಟಿತು. ಕೆಕೆಆರ್‌ಗೆ ಟ್ರೋಫಿ ತಂದುಕೊಟ್ಟರು, ಆದರೂ ಅವರೆಷ್ಟೋ ಬದಿಗೊಳ್ಳಲಾದರು. ಈಗ ಪಂಜಾಬ್‌ನ್ನು ಫೈನಲ್‌ಗೆ ತಲುಪಿಸಿದ್ದಾರೆ. ಇಷ್ಟು ಅನ್ಯಾಯ ಅನುಭವಿಸಿದರೂ ಆಟದಿಂದ ಉತ್ತರಿಸಿದ ನಾಯಕನು ಶ್ರೇಯಸ್" ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಇದೇ ವೇಳೆ, ರಾಜಮೌಳಿ ವಿರಾಟ್ VIRAT KHOLI ಬಗ್ಗೆ ಸಹ ಪ್ರಸ್ತಾಪಿಸಿದ್ದು, "ವರ್ಷದಿಂದ ವರ್ಷಕ್ಕೆ ಕೊಹ್ಲಿ ಅಪರೂಪದ ಮಟ್ಟದ ಪ್ರದರ್ಶನ ನೀಡುತ್ತಿದ್ದಾರೆ. ಅವರು ಸಹ ಈ ಟ್ರೋಫಿಗೆ ಅರ್ಹರು. ಫಲಿತಾಂಶ ಏನೇ ಆದರೂ, ಈ ಬಾರಿಯ ಐಪಿಎಲ್ ಫೈನಲ್ ಹೃದಯ ವಿದ್ರಾವಕವಾಗಲಿದೆ," ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

Author:

...
Keerthana J

Copy Editor

prajashakthi tv

share
No Reviews