KUNIGAL : ಬೆಂಗಳೂರಿನ ಕಾಲ್ತುಳಿತದಲ್ಲಿ ಸಾವು | ಕುಣಿಗನಲ್ಲಿ ಮನೋಜ್ ಅಂತ್ಯಕ್ರಿಯೆ

KUNIGAL NEWS : ನಿನ್ನೆ ಬೆಂಗಳೂರಿನ CHINNASWAMY CRICKE STADIUM ನಲ್ಲಿ ನಡೆದಿದ್ದ ಗೆಲುವಿನ ಸಂಭ್ರಮದ ನಡುವೆ, ಭಾರೀ ಜನಸಂದಣಿಯಿಂದ ಕಾಲ್ತುಳಿತ [STAMPEDE] ಸಂಭವಿಸಿ, ತೀವ್ರ ದುಃಖಕಾರಿ ಘಟನೆಯೊಂದು ನಡೆದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನ ಹತ್ತಿರದ ನಾಗಸಂದ್ರ [NAGASANDRA]ಗ್ರಾಮದ ಯುವಕ ಮನೋಜ್ (19) ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮನೋಜ್ ಬೆಂಗಳೂರಿನ ಕೆಂಪಾಪುರದ RESIDENCY COLLEGE ನಲ್ಲಿ BBM ಪದವಿ ಅಧ್ಯಯನ ಮಾಡುತ್ತಿದ್ದ. ಯಲಹಂಕದಲ್ಲಿ ತಂದೆ, ತಾಯಿ ಹಾಗೂ ತಂಗಿಯೊಂದಿಗೆ ವಾಸವಿದ್ದ ಇವರು, ನಿನ್ನೆ ತಮ್ಮ ಸ್ನೇಹಿತರೊಂದಿಗೆ CHINNASWAMY STADIUM ಗೆ ತೆರಳಿದ್ದರು.

ಆದರೆ ಆಟದ ನಂತರದ ವೇಳೆ, STADIUM ನ ಹೊರಬಾಗಿಲಿನಲ್ಲಿ ಉಂಟಾದ ಜನಸಂದಣಿಯಲ್ಲಿ MANOJ ಕಾಲ್ತುಳಿತಕ್ಕೆ ಸಿಲುಕಿದರು. ತಕ್ಷಣಕ್ಕೆ ಸ್ಥಳೀಯರು ರಕ್ಷಿಸಲು ಯತ್ನಿಸಿದರೂ, ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.‌ ಈ ಸುದ್ದಿ ಕುಟುಂಬಸ್ಥರು ಹಾಗೂ ಊರವರಿಗೆ ತಿಳಿಯುತ್ತಿದ್ದಂತೆಯೇ ಆಕ್ರಂಧನ ಮುಗಿಲು ಮುಟ್ಟಿತು.

ಇನ್ನು ಮನೋಜ್‌ ಅವರ ಮೃತದೇಹ ಇಂದು ಹುಟ್ಟೂರಾದ ನಾಗಸಂದ್ರ ಗ್ರಾಮಕ್ಕೆ ತಲುಪಿಸಲಾಗಿದ್ದು, ಮನೋಜ್ ಅವರ ತೋಟದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇನ್ನು ಅಂತಿಮ ಸಂಸ್ಕಾರದಲ್ಲಿ ನೂರಾರು ಗ್ರಾಮಸ್ಥರು, ಸ್ನೇಹಿತರು, ಸಂಬಂಧಿಕರು ಭಾಗವಹಿಸಿ ಮನೋಜ್‌ಗೆ ಕಣ್ಣೀರಿನಿಂದ ವಿದಾಯ ಹೇಳಿದರು.

 

 

 

Author:

...
Keerthana J

Copy Editor

prajashakthi tv

share
No Reviews