SIRA : ಶಿರಾದಲ್ಲಿ ಮಳೆಯ ಆರ್ಭಟ | ರೈತರ ಮೊಗದಲ್ಲಿ ಸಂತಸ

SIRA RAIN : ಬರದ ನಾಡು ಶಿರಾ ತಾಲ್ಲೂಕಿನ ಹಲವೆಡೆ ಮಳೆರಾಯ ಆರ್ಭಟವನ್ನು ಮಧ್ಯಾಹ್ನದಿಂದ ಕೊಂಚ ಹೆಚ್ಚಾಗಿಯೇ ಇತ್ತು. ಇಷ್ಟು ದಿನ ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ದಿಢೀರನೇ ಬಂದ ಮಳೆರಾಯ ತಂಪೇರೆದಿದ್ದಾನೆ. ಹಲವು ದಿನಗಳಿಂದ ಮಳೆ ಇಲ್ಲದೆ ಸೊರಗಿದ್ದ ರೈತ ಬಂದ ಭರ್ಜರಿ ಮಳೆಗೆ ಸಂತಸಪಟ್ಟಿದ್ದಾನೆ.  ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಜೂ.11 ರಿಂದ ಭರ್ಜರಿ ಮಳೆಯಾಗುತ್ತೆ ಅಂತಾ ಹೇಳಿದ್ರು, ಜೊತೆಗೆ ಕೆಲವು ಜಿಲ್ಲೆಗಳಲ್ಲಿ 9ರಿಂದಲೇ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು  ಕೂಡ ತಿಳಿಸಿತ್ತು. ಅದರಂತೆ ಇಂದು ಶಿರಾದ ಹಲವು ಕಡೆಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ.

ಹೌದು, ಕಳೆದ ಹತ್ತು ಹದಿನೈದು ದಿನದಿಂದ ಬಿಸಿಲಿನ ಬೇಗೆಗ ಬೆಂದಿದ್ದ ಈ ಭಾಗದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ತಾಲೂಕಿನ ನಗರವು ಸೇರಿದಂತೆ ವಿವಿಧ ಭಾಗಗಳಲ್ಲಿ  ಇಂದು ಮಧ್ಯಾಹ್ನವೇ ಮಳೆಯಾಗಿದೆ. ತಾಲೂಕಿನ ಕಸಬ ಹೋಬಳಿಯ ಹನುಮಂತಪುರ ,ಓಜುಗುಂಟೆ, ಹುಲಿಕುಂಟೆ ಹೋಬಳಿಯ ಕಳೆದ ಒಂದು ಗಂಟೆಯಿಂದಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು,   ರೈತರ ಮುಖದಲ್ಲಿ ಮತ್ತಷ್ಟು ಸಂತಸ ಹೆಚ್ಚಾಗಿದೆ.

Author:

...
Keerthana J

Copy Editor

prajashakthi tv

share
No Reviews