CHIKKANAYAKANAHALLI : ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಜನ ಜೆಸಿಬಿ, ಟ್ರ್ಯಾಕ್ಟರ್‌ ವಾಪಾಸ್‌ ಕಳಿಸಿ ಆಕ್ರೋಶ

CHIKKANAYKANAHALLI NEWS : ಒಮ್ಮೊಮ್ಮೆ ಜನರ ಆಕ್ರೋಶ ಎಷ್ಟರ ಮಟ್ಟಿಗೆ ಇರುತ್ತೆಅನ್ನೋದಕ್ಕೆ ಈ ಸುದ್ದಿ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ ಚಿಕ್ಕನಾಯಕನಹಳ್ಳಿಯಲ್ಲಿರುವ 22 ನೇವಾರ್ಡ್‌ ಮಾರುತಿ ನಗರದಲ್ಲಿ ರಸ್ತೆಇಲ್ಲ, ಚರಂಡಿಸರಿಯಿಲ್ಲ, ಅಕ್ಕಪಕ್ಕ  ಗಿಡಗೆಂಟೆಗಳು ಬೆಳೆದು ವಿಷಜಂತುಗಳ ಅವಾಸ್ಥಾನವಾಗುತ್ತಿದೆ. ರಾತ್ರಿಆದ್ರೆವಿದ್ಯುತ್‌ ದ್ವೀಪವಿಲ್ಲದಮಹಿಳೆಯರು, ಮಕ್ಕಳುಓಡಾಡಲುಭಯಪಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಬೇಕು ಅಂತ ಪ್ರಜಾಶಕ್ತಿ ಟಿವಿ ವರದಿ ಮಾಡಿತ್ತು. ವರದಿ ಮಾಡಿದ ಬೆನ್ನಲ್ಲೆಇದೀಗ ವಾರ್ಡ್‌ ಕೌನ್ಸಿಲರ್‌ ಪುಷ್ಪ ನಾಗರಾಜು ಮತ್ತು ಅಧಿಕಾರಿಗಳು ಕಾಮಗಾರಿ ಮಾಡಲು ಹೋಗಿದ್ರು. ಹಲವು ಬಾರಿ ಮನವಿ ಮಾಡಿದ್ರುಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಅಂತ ರೊಚ್ಚಿಗೆದ್ದಿದ್ರು ಜನ. ಸ್ಥಳಕ್ಕೆ ಅಧಿಕಾರಿಗಳು ಮತ್ತು ಕೌನ್ಸಿಲರ್‌ ಬಂದ ಕೂಡಲೇ ಕಾಮಗಾರಿ ಮಾಡದಂತೆ ತಡೆದು ಆಕ್ರೋಶ ಹೊರಹಾಕಿದ್ರು.

ಇನ್ನು ಸ್ಥಳದಲ್ಲಿ ವಾರ್ಡ್‌ನ ಸಾರ್ವಜನಿಕರು ರಸ್ತೆ ಮಾತ್ರವಲ್ಲ, ಮಾರುತಿ ನಗರದ ಎಲ್ಲಾ ರಸ್ತೆಗಳನ್ನು ಸರಿಪಡಿಸಿ, ಶೀಘ್ರದಲ್ಲೇ ಚರಂಡಿ ಸಮಸ್ಯೆಗೆ ಪರಿಹಾರ ನೀಡಬೇಕು ಅಂತ ಜನರು ಕಾಮಗಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳಕ್ಕೆ ತರಲಾಗಿದ್ದ ಜೆಸಿಪಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಸಾರ್ವಜನಿಕರು ತಡೆದು ವಾಪಸ್ ಕಳಿಸಿದ್ರು.

ಸುಮಾರು 15 ವರ್ಷದಿಂದಲೂ ಮಾರುತಿ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಸರಿಯಾಗಿಆಗಿಲ್ಲ. ಎಷ್ಟೇಬಾರಿ ಮನವಿ ಮಾಡಿದ್ರು ಕೂಡ ಪುರಸಭೆ ಅಧಿಕಾರಿಗಳು ಕೌನ್ಸಲರ್‌ ಗಳುಇತ್ತಮುಖಹಾಕುತ್ತಿರಲಿಲ್ಲ. ಇದೀಗ ಇಲ್ಲಿನ ಕೌನ್ಸಲರ್‌ ಯಾವುದೋ 100 ಮೀಟರ್‌ ರಸ್ತೆಮಾಡಲುಬಂದಿದ್ದಾರೆ. ಇದು ಎಷ್ಟು ಅಂತ ಅಧಿಕಾರಿಗಳು ಮತ್ತು ಕೌನ್ಸಿಲರ್‌ ವಿರುದ್ಧಕಿ ಡಿಕಾರಿದ್ರು.

ಇದೇ ವೇಳೆ ಸಾರ್ವಜನಿಕರು ಕೌನ್ಸಿಲರ್ ಪುಷ್ಪ ನಾಗರಾಜು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. "ಇಷ್ಟು ದಿನ ಎಲ್ಲಿ ಹೋಗಿದ್ದೀರಿ? ವರದಿ ಬಂದ ಮೇಲೆ ಮಾತ್ರ ಬರುವುದೇಕೆ? ನಾವು ಈವರೆಗೆ ನಿಮ್ಮ ಕಣ್ಣಿಗೆ ಬೀಳಲಿಲ್ಲವೇಕೆ?" ಎಂದು ಆಕ್ರೋಶಹೊರಹಾಕಿದ್ರು. ಈವೇಳೆ ಕೌನ್ಸಿಲರ್‌ ಪುಷ್ಪನಾಗರಾಜು ಮಾತನಾಡಿ, "ನಾನು ಅಧಿಕಾರಿಗಳ ಜೊತೆ ಮಾತನಾಡಿ ಸಾಧ್ಯವಾದಷ್ಟು ಬೇಗನೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡುತ್ತೇನೆ," ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ರು.

ಅದೇನೇ ಇರಲಿ ಪುರಸಭೆ ಅಧಿಕಾರಿಗಳು ಮತ್ತು ಕೌನ್ಸಿಲರ್ಗಳು ಕೂಡಲೇ ಮಾರುತಿನಗರದ ಜನರ ಸಮಸ್ಯೆಯನ್ನ ಬಗೆಹರಿಸಬೇಕು.ಕಾಟಾಚಾರಕ್ಕೆ ಯಾವುದೋ ಚಿಕ್ಕಪುಟ್ಟ ಕೆಲಸ ಮಾಡಿ ಕೈತೊಳೆದು ಕೊಳ್ಳುವುದು ಸರಿಯಲ್ಲ. ಮಾರುತಿ ನಗರದ ಜನರಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಇಲ್ಲವಾದಲ್ಲಿ ಜನರುಪುರಸಭೆಗೆ ಮುತ್ತಿಗೆ ಹಾಕಿ ತಮ್ಮಆಕ್ರೋಶ ಹೊರಹಾಕುವ ಕಾಲ ದೂರವಿಲ್ಲ. ಅಧಿಕಾರಿಗಳೇ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.

 

 

Author:

...
Keerthana J

Copy Editor

prajashakthi tv

share
No Reviews