TUMAKURU : ನಮ್ಮ ತುಮಕೂರಿಗೆ ಶೈಕ್ಷಣಿಕ ನಗರಿ, ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೇ ರಾಜಧಾನಿಯಾಗಿಯೂ ಅಭಿವೃದ್ಧಿ ಆಗ್ತಿದೆ. ಆದರೆ ಸ್ವಚ್ಛತೆಯ ವಿಚಾರದಲ್ಲಿ ತುಮಕೂರಿಗೆ ಕಪ್ಪುಚುಕ್ಕಿ ಬಂದಿದೆ. ಒಂದು ಕಡೆ ಕಸದ ಸಮಸ್ಯೆ ಮತ್ತೊಂದ್ಕಡೆ ಪಾರ್ಕ್ಗಳ ಪಾಳು ಬೀಳುತ್ತಿದ್ದು, ಪಾಲಿಕೆ ಸಿಬ್ಬಂದಿ ಏನ್ ಮಾಡ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ತುಮಕೂರು ಮಹಾನಗರ ವ್ಯಾಪ್ತಿಯಲ್ಲಿ ಜನರ ಅನುಕೂಲಕ್ಕಾಗಿ ಅನೇಕ ಪಾರ್ಕ್ಗಳ ನಿರ್ಮಾಣ ಮಾಡಲಾಗಿದೆ. ನಿರ್ಮಾಣ ಏನೋ ಮಾಡಿದೆ. ಆದರೆ ಅದರ ನಿರ್ವಹಣೆ ಮಾಡುವಲ್ಲಿ ಮಾತ್ರ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಅಭಿಯಾನ ನಡೆಸುತ್ತಿದ್ದು, ಸಾಲು ಸಾಲಾಗಿ ಪಾರ್ಕ್ಗಳ ದುಸ್ಥಿತಿಯನ್ನು ಬಿತ್ತರಿಸುವ ಕೆಲಸ ಮಾಡ್ತಾ ಇದೆ. ಇವತ್ತು ದೇವರಾಯಪಟ್ಟಣದ 35ನೇ ವಾರ್ಡ್ನಲ್ಲಿರೋ ಪಾರ್ಕ್ನ ಸ್ಥಿತಿಯನ್ನು ಬಯಲು ಮಾಡ್ತಾ ಇದ್ದೇವೆ. ಹೌದು ನಗರದ ದೇವರಾಯ ಪಟ್ಟಣದ 35 ನೇ ವಾರ್ಡ್ 4ನೇ ಅಡ್ಡ ರಸ್ತೆಯಲ್ಲಿ ಪಾರ್ಕ್ನನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ ಪಾರ್ಕ್ನ ನಿರ್ವಹಣೆ ಮಾಡದೇ ಪಾರ್ಕ್ ತುಂಬಾ ಗಿಡ, ಬಳ್ಳಿ, ಗಿಡ ಗಂಟೆಗಳು ಬೆಳೆದು ನಿಂತಿದ್ದು, ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಇದರಿಂದ ಜನರು ಓಡಾಡಲು ಹೆದರುವಂತಾಗಿದೆ.
ಇನ್ನು ಈ ಪಾರ್ಕ್ಗೆ ವಯಸ್ಸಾದವರು, ಮಕ್ಕಳು ಬೆಳಗ್ಗೆ ಹಾಗೂ ಸಂಜೆ ವೇಳೆ ವಾಕ್ ಮಾಡಲು, ಆಟವಾಡಲು ಬರ್ತಾರೆ. ಆದರೆ ಹಾವು, ಚೇಳು ಸೇರಿ ವಿಷಜಂತುಗಳ ಕಾಟದಿಂದ ಪಾರ್ಕ್ನಲ್ಲಿ ಒಂದು ನಿಮಿಷ ಕೂಡ ಇರಲು ಜನರು ಭಯ ಪಡುವಂತಾಗಿದೆ. ಪಾರ್ಕ್ಗಳು ಪಾಳು ಬೀಳ್ತಾ ಇದ್ದು ಅಧಿಕಾರಿಗಳು ಮಾತ್ರ ತಮ್ಮ ಗಮನಕ್ಕೆ ಬಂದೇ ಇಲ್ಲದಂತೆ ಇದ್ದಾರೆ. ಪಾರ್ಕ್ನ ನಿರ್ಮಾಣ ಮಾಡಿದರೆ ಸಾಲದು, ಅದರ ನಿರ್ವಹಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಆದರೆ ಜವಾಬ್ದಾರಿಯನ್ನು ಮರೆತು ಪಾಲಿಕೆ ಕೈ ಕಟ್ಟಿ ಕುಳಿತಿದೆ.